ಹಾಸನ: ಹಾಸನದ ಆರ್ಸಿ ರಸ್ತೆಯಲ್ಲಿ ನಡೆಯುತ್ತಿದ್ದ ಪ್ಯಾಚ್ ವರ್ಕ್ಗೆ ಸಂಸದ ಪ್ರಜ್ವಲ್ ರೇವಣ್ಣ ತಡೆ ನೀಡಿದ್ದು, ಚೆನ್ನಾಗಿರುವ ರಸ್ತೆಗೆ ಪ್ಯಾಚ್ ವರ್ಕ್ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.
ಹಾಸನದಲ್ಲಿ ಸಂಸದರ ನಿವಾಸದ ಮುಂದಿರುವ ರಸ್ತೆಯಲ್ಲಿದ್ದ ಸ್ಪೀಟ್ ಬ್ರೇಕ್ ಅನ್ನು ರಾತ್ರೋರಾತ್ರಿ ಕಿತ್ತು ಹಾಕಿ ಸುಮಾರು 30 ಮೀಟರ್ ಮಾತ್ರ ಹೊಸ ರಸ್ತೆ ನಿರ್ಮಾಣ ಮಾಡಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಮಾತನಾಡಿರುವ ಪ್ರಜ್ವಲ್ ರೇವಣ್ಣ, ಯಾರ ಗಮನಕ್ಕೂ ತಿಳಿಸದೆ ಚೆನ್ನಾಗಿದ್ದ ರಸ್ತೆಯನ್ನು ಕಿತ್ತು ಕಾಮಗಾರಿ ಮಾಡುತ್ತಿದ್ದಾರೆಂದು ದೂರಿದ್ದಾರೆ. ಯಾವುದೇ ಅಧಿಕಾರಿಗಳನ್ನು ಕೇಳಿದರೆ, ನಮಗೆ ಮಾಹಿತಿ ಇಲ್ಲ ಎಂದು ಹೇಳುತ್ತಿದ್ದಾರೆ. ರಾಜಕೀಯ ದುರುದ್ದೇಶದಿಂದಲೇ ಈ ರೀತಿ ಮಾಡುತ್ತಿದ್ದಾರೆಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಪಬ್ಜಿ ಪ್ರೇಮಿಗಳಿಗೆ ಶುಭಸುದ್ದಿ; ಮತ್ತೆ ಬರಲಿದೆ ನಿಮ್ಮ ಫೇವರೆಟ್ ಗೇಮ್
ರಾತ್ರೋರಾತ್ರಿ ಬರುತ್ತಾರೆ. ಎಲ್ಲೆಂದರಲ್ಲಿ ರಸ್ತೆಯನ್ನು ಕಿತ್ತು ಪ್ಯಾಚ್ ಹಾಕ್ತಾರೆ. ಯಾವುದೋ ಹಿಂದಿನ ಅನುದಾನ ಆಗಿರುವುದನ್ನು ತೋರಿಸುತ್ತಾರೆ. ಈ ಬಗ್ಗೆ ಪ್ರಶ್ನಿಸಿದವರಿಗೆ ಧಮ್ಕಿ ಹಾಕುತ್ತಾರೆಂದು ಗುಡುಗಿದರು.
ಸಂಸದರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಪ್ಯಾಚ್ ವರ್ಕ್ ಮಾಡುತ್ತಿದ್ದ ಕಾರ್ಮಿಕರು ಕಾಮಗಾರಿಯನ್ನು ನಡುವಲ್ಲೇ ಬಿಟ್ಟು ಪರಾರಿಯಾಗಿದ ಪ್ರಸಂಗವೂ ಜರುಗಿತು. ಹಾಸನದ ಸಂಸದರ ನಿವಾಸ ಹಾಗೂ ಹಾಸನ ಹಿಮ್ಸ್ ನಡುವೆ ಇರುವ ಆರ್ ರಸ್ತೆಯಲ್ಲಿ ಕೆಲಕಾಲ ಗಲಿಬಿಲಿ ವಾತಾವರಣ ಉಂಟಾಯಿತು.
ಬಳಿಕ ಸಂಸದರ ಕರೆಯಂತೆ ಸ್ಥಳಕ್ಕೆ ಹಾಸನ ಎಡಿಸಿ ಕವಿತಾ ರಾಜಾರಾಮ್ ಭೇಟಿ ನೀಡಿ ಪರಿಶೀಲಿಸಿದರು. (ದಿಗ್ವಿಜಯ ನ್ಯೂಸ್)
ಮೋಸದ ದುಡ್ಡು-ಹೆಲಿಕಾಪ್ಟರ್ನಲ್ಲಿ ಯಾತ್ರೆ! ಪದವಿ ಮುಗಿಸಿದ ಯುವಕರೇ ಮಿಸ್ಮಾಡ್ದೆ ಇದನ್ನು ಓದಿ…