ಬೆಂಗಳೂರು: ಪದವಿ ಮುಗಿಸಿದ ಯುವಕರೇ ಎಚ್ಚರ! ನಿಮಗೂ ಈತನಿಂದ ಜಾಬ್ ಆಫರ್ ಲೆಟರ್ ಬಂದಿರಬಹುದು ಒಮ್ಮೆ ಚೆಕ್ ಮಾಡಿಕೊಳ್ಳಿ…
ಇಂಡಿಯನ್ ಪೋಸ್ಟ್, ಇಸ್ರೋ, ಮೆಸ್ಕಾಂ, ಎಸ್ಎಸ್ಎಲ್ಸಿ -ಪಿಯು ಬೋರ್ಡ್ನಲ್ಲಿ ಕೆಲಸ ಸಿಗುತ್ತೆ ಎಂಬ ಆಸೆಗೆ ಬಿದ್ದು ಲಕ್ಷಲಕ್ಷ ಹಣ ಕೊಟ್ಟವರೀಗ ಕೈ ಸುಟ್ಟಿಕೊಂಡಿದ್ದಾರೆ. ಹೌದು, ಡಿಗ್ರಿ ಮುಗಿಸಿದ ಯುವಕರನ್ನೇ ಟಾರ್ಗೆಟ್ ಮಾಡುತ್ತಿದ್ದ ಖತರ್ನಾಕ್ ವಂಚಕನೊಬ್ಬ ಸರ್ಕಾರಿ ಕೆಲಸ ಕೊಡಿಸೋದಾಗಿ 2 ಕೋಟಿಗೂ ಅಧಿಕ ಹಣವನ್ನು ಪೀಕಿದ್ದಾರೆ. ನಕಲಿ ಆಫರ್ ಲೆಟರ್ ಕೊಟ್ಟು ತಾನೆ ಕೆಲದಿನ ಸಂಬಳವನ್ನೂ ಕೊಟ್ಟಿದ್ದಾನೆ. ಅಷ್ಟೇ ಅಲ್ಲ, ಈ ಗೋಲ್ಮಾಲ್ ಗೋವಿಂದ ಮೋಸದ ದುಡ್ಡಲ್ಲಿ ಹೆಲಿಕಾಪ್ಟರ್ನಲ್ಲಿ ತೀರ್ಥಯಾತ್ರೆ ಮಾಡಿ, ತಿರುಪತಿ ಹುಂಡಿಗೂ 5 ಲಕ್ಷ ಹಾಕುವ ಮೂಲಕ ತಿಮ್ಮಪ್ಪನಿಗೂ ವಂಚನೆಯ ಪಾಲು ಕೊಟ್ಟಿದ್ದಾನೆ.
ಅಂದಹಾಗೆ ಯುವಕರಿಗೆ ಪಂಗನಾಮ ಹಾಕಿದ್ದವನ ಹೆಸರು ಪ್ರಭಾಕರ್. ಬೆಂಗಳೂರು ಮೂಲದ ಪ್ರಭಾಕರ್, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು ಸೇರಿದಂತೆ ಇತರ ಜಿಲ್ಲೆಗಳ ಯುವಕರನ್ನು ವಂಚಿಸಿದ್ದಾನೆ. ಕೆಲಸ ಕೊಡಿಸುವುದಾಗಿ ಹಣ ಪಡೆದು ನಕಲಿ ಆಫರ್ ಲೆಟರ್ ಕೊಡುತ್ತಿದ್ದ ಪ್ರಭಾಕರ್, ಆರಂಭದಲ್ಲಿ ಯಾರಿಗೂ ಅನುಮಾನ ಬಾರದಂತೆ ಈತನೇ ಕೆಲ ತಿಂಗಳ ಕಾಲ ಸಂಬಳ ನೀಡುತ್ತಿದ್ದ.
ಈತನ ವಂಚನೆ ಬಗ್ಗೆ ಚಿಕ್ಕಮಗಳೂರು ಮೂಲದ ಯುವಕ ಉಮೇಶ್ ದೂರು ನೀಡಿದ್ದರು. ಈ ದೂರಿನ ಜಾಡು ಹಿಡಿದು ಹೊರಟ ಪೊಲೀಸರಿಗೆ ಪ್ರಭಾಕರ್ನ ಗೋಲ್ಮಾಲ್ ರಹಸ್ಯ ಬಯಲಾಗಿದೆ. ಪ್ರಭಾಕರ್ ಮತ್ತು ಈತನ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದುವೆ ಆಗಬೇಕಿದ್ದ ಪ್ರೇಮಿಗಳು ಜಮೀನಿನಲ್ಲೇ ವಿಷ ಕುಡಿದರು! ಆತ್ಮಹತ್ಯೆಗೆ ಅದೇ ಕಾರಣವಾಯ್ತ?
ಇನ್ನೇನು ನಿಶ್ಚಿತಾರ್ಥ ನಡೆಯಬೇಕು… ಅಷ್ಟರಲ್ಲಿ ಬಂದ ಜವರಾಯ ಅಕ್ಕ-ತಂಗಿಯ ಪ್ರಾಣ ಹೊತ್ತೊಯ್ದ!