ಹಾಸನ: ಮಗನೇ ನಿನ್ನ ಅಪ್ಪ ಸತ್ತಿದ್ದಾರೆ. ಅಂತ್ಯಸಂಸ್ಕಾರ ಮಾಡಬೇಕಿದೆ. ಎಲ್ಲಿದ್ದರೂ ಬೇಗ ಬಾ ಮಗನೇ ಎಂದು ತಾಯಿಯೊಬ್ಬಳು ಗಂಡನ ಸಾವಿನ ನೋವಿನಲ್ಲೇ ಮಗನ ಬರುವಿಕೆಗಾಗಿ ಗೋಳಿಡುತ್ತಿರುವ ಮನಕಲಕುವ ಘಟನೆ ಹಾಸನ ತಾಲ್ಲೂಕಿನ ಸಜ್ಜೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸಾಲದ ಶೂಲಕ್ಕೆ ಸಿಲುಕದಿರಿ ಎಂದು ಎಷ್ಟೇ ಬುದ್ಧಿವಾದ ಹೇಳಿದರು, ಅತಿಯಾದ ಆಸೆಗೆ ಬಿದ್ದು ಮೈತುಂಬಾ ಸಾಲ ಮಾಡಿಕೊಳ್ಳುತ್ತಾರೆ. ಅಂತವರು ನೆಮ್ಮದಿಯಿಂದ ಇರಲಾರರು, ಮನೆಯವರನ್ನು ನೆಮ್ಮದಿಯಿಂದ ಇರಲು ಬಿಡಲಾರರು ಎಂಬುದಕ್ಕೆ ಈ ಘಟನೆ ಪ್ರತ್ಯಕ್ಷ ಸಾಕ್ಷಿಯಾಗಿದ್ದರೂ, ಒಮ್ಮೆ ಆಲೋಚಿಸದರೆ ಬದುಕಿಗೊಂದು ಅರ್ಥ ಸಿಗುತ್ತದೆ.
ಹೌದು. ಮಗ ಸಾಲ ಮಾಡಿದ್ದಕ್ಕೆ ಸಾಲಗಾರರ ಕಾಟ ತಡೆಯಲಾರದೆ ತಂದೆಯೋರ್ವ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಜ್ಜೇನಹಳ್ಳಿ ಗ್ರಾಮದ ನಿವಾಸಿ ಶಿವಣ್ಣ (50) ಆತ್ಮಹತ್ಯೆ ಮಾಡಿಕೊಂಡಾತ. ಮಗ ಮಂಜುನಾಥ್ 25 ಲಕ್ಷ ರೂಪಾಯಿಗು ಹೆಚ್ಚು ಸಾಲ ಮಾಡಿ, ಸಾಲಗಾರರ ಕಾಟ ತಾಳಲಾರದೆ ಮೂರು ತಿಂಗಳ ಹಿಂದೆಯೇ ಊರು ಬಿಟ್ಟು ಹೋಗಿದ್ದ.
ಮಂಜುನಾಥ್ ಮಾಡಿದ್ದ ಸಾಲ ಪೋಷಕರಿಗೆ ತಿಳಿದಿರಲಿಲ್ಲ. ಇತ್ತ ಮಂಜುನಾಥ್ ಸುಳಿವು ಸಿಗದಿದ್ದರಿಂದ ಸಾಲ ಕೊಟ್ಟವರು ಆತನ ಮನೆ ಬಳಿ ಬಂದು ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದರು. ಇದರಿಂದ ಮನನೊಂದ ಶಿವಣ್ಣ ವಿಷ ಸೇವಿಸಿ, ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಊರು ಬಿಟ್ಟಿರುವ ಮಗನನ್ನು ತಂದೆಯ ಅಂತ್ಯಸಂಸ್ಕಾರಕ್ಕೆ ಆಗಮಿಸುವಂತೆ ತಾಯಿ ಕಣ್ಣೀರಾಕುತ್ತಾ ಮನವಿ ಮಾಡುತ್ತಿರುವ ದೃಶ್ಯ ಎಂಥವರ ಕಣ್ಣಲ್ಲೂ ನೀರು ತುಂಬಿಕೊಳ್ಳುವಂತೆ ಮಾಡುತ್ತದೆ. ಎಲ್ಲಿದ್ದರು ಬಂದು ತಂದೆಯ ಅಂತ್ಯಸಂಸ್ಕಾರ ಮಾಡುವಂತೆ ತಾಯಿ ಮತ್ತು ಅಕ್ಕ ಕಣ್ಣೀರಿಡುತ್ತಿದ್ದು, ಮಗನ ಬರುವಿಕೆಗಾಗಿ ಕಾದಿದ್ದಾರೆ.
ಇಂತಹ ಘಟನೆಗಳು ನಡೆಯಲೇಬಾರದು ಎಂಬುದು ಎಲ್ಲಯ ಆಶಯವಾಗಿದೆ. ಆದರೆ, ಕ್ರೂರ ವಿಧಿಯಾಟ ಏನಿದೆಯೋ? ಯಾರು ಎದರು ನೋಡದ ಅಮಾನವೀಯ ಘಟನೆ ನಡದೇ ಹೋಗಿದೆ. ಸಾಲಕ್ಕೆ ನುಗ್ಗುವ ಮುನ್ನ ಒಮ್ಮೆ ಯೋಚಿಸಿದರೆ ಒಳಿತು. ಒಬ್ಬರ ದುರಾಸೆಗೆ ಯಾರೆಲ್ಲ ಬಲಿಪಶುವಾಗಬೇಕಾಗುತ್ತದೆ ಎಂಬುದಕ್ಕೆ ಈ ಘಟನೆ ಸ್ಪಷ್ಟ ಉದಾಹರಣೆ. ಹಾಗೆಯೇ ಸಾಲು ನೀಡುವವರು ಸಹ ಮನಷ್ಯತ್ವ ಮರೆತರೆ ಏನಾಗುತ್ತದೆ ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದ್ದು, ಇನ್ಮುಂದೆ ಇಂತಹ ಘಟನೆ ನಡೆಯದಿರಲಿ ಎಂದು ಪಾರ್ಥಿಸೋಣ.
ಅಂಕಲ್ ಅಂತ್ಯಸಂಸ್ಕಾರ ಬಿಟ್ಟು ಒಂಟಿಯಾಗಿ ಮನೆಗೆ ಬಂದ ಯುವತಿ: ಪಾಲಕರಿಗೆ ಕಾದಿತ್ತು ಬಿಗ್ ಶಾಕ್!
ತಾಲೂಕು ಕಚೇರಿ ಮುಂದೆಯೇ ತನ್ನ ಹೊಟ್ಟೆಗೆ ತಾನೇ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ರೈತ..!