More

    ಹಬ್ಬಕ್ಕೆಂದು ಅಜ್ಜಿ ಊರಿಗೆ ಹೋದ ಯುವಕ ಮರಳಿದ್ದು ಶವವಾಗಿ: ತಡರಾತ್ರಿ ನಡೆಯಿತು ಭೀಕರ ಘಟನೆ

    ಹಾಸನ: ಯುವಕನೊಬ್ಬನನ್ನು ಗುಂಡಿಕ್ಕಿ ಕೊಲೆ ಮಾಡಿರುವ ಅಮಾನವೀಯ ಘಟನೆ ಚನ್ನರಾಯಪಟ್ಟಣ ತಾಲೂಕಿನಲ್ಲಿ ಗುರುವಾರ ತಡ ರಾತ್ರಿಯಲ್ಲಿ ನಡೆದಿದೆ.

    ಪುನೀತ್ (28) ಕೊಲೆಯಾದ ಯುವಕ. ಬೇಡಿಗನಹಳ್ಳಿ ಕೆರೆಯ ಏರಿ ಮೇಲೆ ಶೂಟೌಟ್ ಮಾಡಿ ಕೊಲೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಪುನೀತ್​ ಸ್ವಗ್ರಾಮ ಹೊಸೂರಿನಿಂದ ಬೇಡಿಗನಹಳ್ಳಿಯ ಅಜ್ಜಿಯ ಮನೆಗೆ ಹಬ್ಬಕ್ಕೆಂದು ಹೋಗಿದ್ದ. ಹಬ್ಬ ಮುಗಿಸಿಕೊಂಡು ವಾಪಸ್ ಬರುವಾಗ ಕೆರೆಯ ಏರಿ ಮೇಲೆ ಕೊಲೆ ಮಾಡಲಾಗಿದೆ.

    ಇದನ್ನೂ ಓದಿ: ಚಂದನವನಕ್ಕೆ ನಶೆ ನಂಟು: ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

    ಘಟನಾ ಸ್ಥಳಕ್ಕೆ ಚನ್ನರಾಯಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಮೃತದೇಹವನ್ನು ಚನ್ನರಾಯಪಟ್ಟಣದ ಸರ್ಕಾರಿ ಶವಾಗಾರಕ್ಕೆ ರವಾನೆ ಮಾಡಲಾಗಿದೆ. (ದಿಗ್ವಿಜಯ ನ್ಯೂಸ್​)

    ಪ್ರತಿ ವರ್ಷ ತಪ್ಪದೇ ನಟ ವಿಷ್ಣುವರ್ಧನ್​ ಬರ್ತಡೇ ಆಚರಿಸುತ್ತಿದ್ದ ಅಭಿಮಾನಿ ನೇಣಿಗೆ ಶರಣು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts