ಬೆಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ನಾಯಕರು ನಾನಾ ರೀತಿಯ ಹೇಳಿಕೆ ನೀಡುತ್ತಾ ಇರುತ್ತಾರೆ. ಹರಿಪ್ರಸಾದ್ ಬಿ.ಕೆ ಇದೀಗ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ವಿರುದ್ಧ ಟ್ವಿಟರ್ನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ತಮ್ಮ ಟ್ವೀಟ್ನಲ್ಲಿ ಹರಿಪ್ರಸಾದ್ ಬಿ.ಕೆ “ಗಲಭೆ, ದೊಂಬಿಗಳೇ ಬಿಜೆಪಿಯ ಚುನಾವಣಾ ಸ್ವಯಂ ಘೋಷಿತ”ಚಾಣಕ್ಯ”ನ ರಣತಂತ್ರಗಳು ನಿನ್ನೆ ಕೊರಟಗೆರೆಯಲ್ಲಿ ಕಾರ್ಯರೂಪಕ್ಕಿಳಿದಿದೆ.
ದಲಿತ ಸಮುದಾಯದ ನಾಯಕ,ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ @DrParameshwara ಮೇಲಿನ ದಾಳಿ,ಬಿಜೆಪಿಯ ಸೋಲಿನ ಹತಾಶೆ,ಸೇಡಿನ ರಾಜಕೀಯದ ಕರಾಳ ಮುಖ ಅನಾವರಣವಾಗಿದೆ.
ಕಲ್ಪತರು ನಾಡು ಫಲಿತಾಂಶದ ಮೂಲಕ ಉತ್ತರ ಕೊಡಲಿದೆ” ಎಂದು ಬರೆದುಕೊಂಡಿದ್ದಾರೆ.
ಗಲಭೆ,ದೊಂಬಿಗಳೇ ಬಿಜೆಪಿಯ ಚುನಾವಣಾ ಸ್ವಯಂ ಘೋಷಿತ"ಚಾಣುಕ್ಯ"ನ ರಣತಂತ್ರಗಳು ನಿನ್ನೆ ಕೊರಟಗೆರೆಯಲ್ಲಿ ಕಾರ್ಯರೂಪಕ್ಕಿಳಿದಿದೆ.
— Hariprasad.B.K. (@HariprasadBK2) April 29, 2023
ದಲಿತ ಸಮುದಾಯದ ನಾಯಕ,ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ @DrParameshwara ಮೇಲಿನ ದಾಳಿ,ಬಿಜೆಪಿಯ ಸೋಲಿನ ಹತಾಶೆ,ಸೇಡಿನ ರಾಜಕೀಯದ ಕರಾಳ ಮುಖ ಅನಾವರಣವಾಗಿದೆ.
ಕಲ್ಪತರು ನಾಡು ಫಲಿತಾಂಶದ ಮೂಲಕ ಉತ್ತರ ಕೊಡಲಿದೆ.