More

    ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ

    ನಿಪ್ಪಾಣಿ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಓದಲೆಂದು ಮನೆ ಕೊಠಡಿಯೊಳಗೆ ಹೋಗಿ ನೇಣು ಹಾಕಿಕೊಂಡ ಘಟನೆ ತಾಲೂಕಿನ ಯಮಗರ್ಣಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ವನಶ್ರೀ ಲಕ್ಷ್ಮಣ ಅಂಬಿ (19) ಮೃತ ಯುವತಿ. ಫೆ.13ರಂದು ವನಶ್ರೀ ಓದಲೆಂದು ಹೋಗಿ ಕೊಠಡಿ ಬಾಗಿಲು ಹಾಕಿಕೊಂಡಿದ್ದಳು. ಪಾಲಕರು ರಾತ್ರಿ ಊಟಕ್ಕೆ ಕರೆಯಲು ಹೋದಾಗ ನೇಣು ಹಾಕಿಕೊಂಡಿರುವುದು ಗೊತ್ತಾಗಿದೆ. ಪಾಲಕರು ಮಾನಕ್ಕೆ ಅಂಜಿ, ಅನಾರೋಗ್ಯದಿಂದ ಮೃತಪಟ್ಟಿದ್ದಾಳೆ ಎಂದು ಶವಸಂಸ್ಕಾರ ಮಾಡಿದ್ದರು. ಬಸವೇಶ್ವರ ಠಾಣೆ ಪೊಲೀಸರು ಮೃತದೇಹ ಹೊರತೆಗೆದು ಶವ ಪರೀಕ್ಷೆ ನಡೆಸಿದ್ದಾರೆ. ಪೊಲೀಸರಿಗೆ ವಿಷಯ ತಿಳಿಸದೆ ಶವಸಂಸ್ಕಾರ ಮಾಡಿದ ಪಾಲಕರ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದೇವೆ ಎಂದು ಪಿಎಸ್‌ಐ ಅನಿತಾ ರಾಠೋಡ ತಿಳಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

    3 ತೊಲ ಬಂಗಾರ, ನಗದು ಕಳ್ಳತನ

    ಸಂಬರಗಿ ಸಮೀಪದ ಖಿಳೇಗಾಂವ ಗ್ರಾಮ ಹೊರವಲಯದಲ್ಲಿರುವ ಮನೆಯೊಂದರ ಬೀಗ ಮುರಿದು, 3 ತೊಲ ಬಂಗಾರ, ಒಂದು ಲಕ್ಷ ರೂ. ನಗದು ಹಾಗೂ 10 ತೊಲ ಬೆಳ್ಳಿ ಆಭರಣ ಕಳ್ಳತನ ಮಾಡಿರುವ ಘಟನೆ ಭಾನುವಾರ ತಡರಾತ್ರಿ ವರದಿಯಾಗಿದೆ. ಸ್ಥಳೀಯ ನಿವಾಸಿ ವಿಕಾಸ ಶಂಕರ ಮಾನೆ ತಮ್ಮ ಹೊಸ ಮನೆಗೆ ವಾಸ್ತವ್ಯಕ್ಕೆ ಭಾನುವಾರ ರಾತ್ರಿ ತೆರಳಿದ್ದರು. ಇದನ್ನು ಗಮನಿಸಿದ ಕಳ್ಳರು ಕೈಚಳಕ ತೋರಿದ್ದಾರೆ. ಜತೆಗೆ ಇನ್ನೋರ್ವ ನಿವಾಸಿ ರೋಹಿತ ಹನಗಂಡಿ ಅವರ ಮನೆಗೆ ಕಳ್ಳರೂ ನುಗ್ಗಿದ್ದರು. ಏನೂ ಸಿಗದ ಕಾರಣ ಪರರಾಯಾಗಿದ್ದಾರೆ.

    ಗಾಯಗೊಂಡಿದ್ದ ವ್ಯಕ್ತಿ ಸಾವು

    ಕೊಕಟನೂರ ಗ್ರಾಮದ ಬೋಸಲೆ ತೋಟದ ವಸತಿ ಪ್ರದೇಶದಲ್ಲಿರುವ ಮನೆಯೊಂದಕ್ಕೆ ಫೆ.10ರಂದು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಭಾನುವಾರ ಮೃತಪಟ್ಟಿದ್ದಾರೆ. ಸ್ಥಳೀಯ ನಿವಾಸಿ ಮಹಾದೇವ ಸಿದ್ದರಾಯ ಮಾದರ (50) ಮೃತ ವ್ಯಕ್ತಿ. ಪತ್ನಿ ರೇಖಾ ಸಮೇತ ಮಹಾದೇವ ಗಂಭೀರವಾಗಿ ಗಾಯಗೊಂಡಿದ್ದರು. ದಂಪತಿಯನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಫೆ.12 ರಂದು ರೇಖಾ ಮೃತಪಟ್ಟಿದ್ದರು. ಐಗಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts