ಕೋಲಾರ: ಜಿಲ್ಲಾ ಪೊಲೀಸ್ ವ್ಯಾಪ್ತಿಯ ವಿವಿಧ ಠಾಣೆ ವ್ಯಾಪ್ತಿಗಳಲ್ಲಿ ಸಂಬಂಧಿಸಿದ್ದ ಪ್ರತ್ಯೇಕ ಕಳ್ಳತನ ಪ್ರಕರಣಗಳಲ್ಲಿ ಪತ್ತೆಯಾಗಿರುವ ಮಾಲನ್ನು ವಾರಸುದಾರರಿಗೆ ಹಿಂದುರಿಗಿಸಲಾಗಿದೆ ಎಂದು ಎಸ್ಪಿ ಎಂ.ನಾರಾಯಣ ಹೇಳಿದರು.
ನಗರದ ಎಸ್ಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಸಂಭವಿಸಿದ್ದ ಕಳ್ಳತನ ಪ್ರಕರಣಗಳ ಕಳ್ಳರ ಪತ್ತೆಗಾಗಿ ಪ್ರತ್ಯೇಕ ತಂಡಗಳನ್ನು ರಚನೆ ಮಾಡಲಾಗಿತ್ತು. ದೂರಿನ ಅನ್ವಯ ತನಿಖೆ ಕೈಗೊಂಡಿದ್ದ ಅಧಿಕಾರಿಗಳು ಬೇರೆ ರಾಜ್ಯಗಳಿಗೆ ತೆರಳಿ ಕಳ್ಳರನ್ನು ಬಂಧಿಸಿ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಮಾಲೂರು ಠಾಣೆ ವ್ಯಾಪ್ತಿಯಲ್ಲಿ 2023ರ ಡಿ.30ರಂದು ಅಂತರಾಜ್ಯ ಕಳ್ಳರು 6 ಲಕ್ಷ ರೂ. ನಗದು ಕಳವು ಮಾಡಿ ತಲೆಮರೆಸಿಕೊಂಡಿದ್ದರು. ಪೊಲೀಸರು ಪ್ರಕರಣ ದಾಖಲಿಕೊಂಡು ತನಿಖೆ ಕೈಗೊಂಡರು, ಯಾವುದೇ ರೀತಿ ಸುಳಿವು ದೊರೆಯದಂತೆ ಕಳ್ಳರು ಎಚ್ಚರ ವಹಿಸಿದ್ದರು. ರಾಜಸ್ತಾನ ನಿವಾಸಿಗಳಾದ ಅಜತ್ಕುಮಾರ್, ಜಮ್ಮು ರಾಜ್ಯದ ಮಹಮದ್ ರಂಜಾನ್, ಮಧ್ಯಪ್ರದೇಶದ ಪ್ರವಿಣ್ ಸ್ವಾನಾಡಿಯಾ ಸ್ಥಳಿಯರ ಸಹಾಯವಿಲ್ಲದೆ ಕಳವು ಮಾಡಿದ್ದರು. ಅವರ ಸ್ವ ಸ್ಥಳಕ್ಕೆ ಪೊಲೀಸರು ತೆರಳಿ ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ ಎಂದರು.
ಮಾಲೂರು ಸಮೀಪದ ಫ್ಲಿಪ್ಕಾರ್ಟ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಾಲಾಜಿ ಎಂಬಾತ 15 ಲಕ್ಷ ರೂ. ಬೆಲೆಬಾಳುವ 15 ಐೋನ್ಗಳನ್ನು ಕಳವು ಮಾಡಿ ಪರಾರಿಯಾಗಿದ್ದ. ಮತ್ತೊಂದು ಪ್ರಕರಣದಲ್ಲಿ ಮಾಲೂರು ತಾಲೂಕಿನ ಶಿವಾರಪಟ್ಟಣ ನಿವಾಸಿ ವೃದ್ಧೆ ಮುನಿರತ್ನ ಅವರ ಮನೆಯ ಮೇಲೆ ನಾಲ್ಕು ಮಂದಿ ದಾಳಿ ಮಾಡಿ 70 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದರು. ಕಾರ್ಯಾಚರಣೆ ನಡೆಸಿ ಹರೀಶ್, ತಿಪ್ಪೇಸ್ವಾಮಿ, ಶಿವರಾಜ್ ಹಾಗೂ ಅಶೋಕ್ನನ್ನು ಬಂಧಿಸಲಾಗಿದೆ ಎಂದರು.
ಕೆಜಿಎಫ್ ನಗರದ ಸುಮತಿ ನಗರ ನಿವಾಸಿ ಪ್ರದಿಪ್ ಫ್ಲಿಪ್ಕಾರ್ಟ್ ಕಂಪನಿಯಲ್ಲಿ ಮೇಲಧಿಕಾರಿಗಳ ಕಣ್ಣು ತಪ್ಪಿಸಿ 14 ಆ್ಯಪಲ್ೋನ್ ಹಾಗೂ 15 ಸಾವಿರ ರೂ. 2024ರ ಜ.17ರಂದು ದೋಚಿ ಏನು ಗೊತ್ತಿಲ್ಲದ ಹಾಗೆ ಇದ್ದ. ಈ ಕುರಿತು ಪ್ರಕರಣ ದಾಖಲಾಗಿ ಪ್ರದಿಪ್ನನ್ನು ವಿಚಾರಣೆ ಮಾಡಿದಾಗ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದರು.
ಕೋಲಾರ ಗ್ರಾಮಾಂತರ ಠಾಣೆ ವ್ಯಾಪ್ತಿ:
ಕೋಲಾರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಎರಡು ಪ್ರಕರಣಗಳು ಸಂಭವಿಸಿದ್ದು, ಆ ಪೈಕಿ ತಾಲೂಕಿನ ವೀರಾಪುರ ಸಮೀಪದ ಹಿಂದುಸ್ಥಾನ್ ಮಿಲ್ ಮತ್ತು ಇಟ್ಟಿಗೆ ಫ್ಯಾಕ್ಟರಿ ಆವರಣದ ಮನೆಯ ಮೇಲೆ ದಾಳಿ ಮಾಡಿರುವ ಮುಸುಕುಧಾರಿಗಳು 125 ಗ್ರಾಂ ಆಭರಣ, 4 ಲಕ್ಷ ರೂ ನಗದು ದೋಚಿ ತಲೆಮರೆಸಿಕೊಂಡಿದ್ದರು. ಮಹಿಳೆ ಮುನಿಯಪ್ಪ ನೀಡಿದ್ದ ದೂರನ್ನು ಆಧರಿಸಿ ಸುಲ್ತಾನ್ ವಿರುದ್ಧ ದೋಷಾರೋಪಟ್ಟಿ ಸಲ್ಲಿಸಲಾಗಿದೆ. ಇನ್ನೋರ್ವ ಆರೋಪಿ ಆಸ್ೀ ಮೃತಪಟ್ಟಿದ್ದಾನೆ ಎಂದು ತಿಳಿಸಿದರು.
ಜ.19ರಂದು ತಾಲೂಕಿನ ನಾಯಕರಹಳ್ಳಿ ಶ್ರೀವೇಣು ಗೋಪಾಲಸ್ವಾಮಿ ದೇವಾಲಯದ ಬಾಗಿಲು ಮುರಿದು ದೇವರ ಅಲಂಕಾರದ ಬೆಳ್ಳಿಯ ಮೂರು ಕಿರೀಟ ಹಾಗೂ 2 ಚಿನ್ನದ ತಾಳಿ ಬೊಟ್ಟುಗಳನ್ನು ಕಳವು ಮಾಡಿದ್ದ ಅರಳಕುಂಟೆ ನಿವಾಸಿ ಸೈಯದ್ ನಯಾಜ್, ವಶಪಡಿಸಿಕೊಂಡು ದೇವಾಲಯಕ್ಕೆ ಹಿಂದುರುಗಿಸಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚಲು ಶ್ರಮಿಸಿರುವ ತನಿಖಾ ತಂಡಕ್ಕೆ ಎಸ್ಪಿ ಎಂ.ನಾರಾಯಣ ತಲಾ 5 ಸಾವಿರ ರೂ. ಬಹುಮಾನ ಘೋಷಿಸಿದರು. ಹೆಚ್ಚುವರಿ ವರಿಷ್ಠಾಧಿಕಾರಿಗಳಾದ ಜಗದೀಶ್, ರವಿಶಂಕರ್ ಹಾಜರಿದ್ದರು.