ಲಖನೌ: ಪೊಲೀಸರನ್ನು ಹತ್ಯೆ ಮಾಡಿ ತಲೆಮರೆಸಿಕೊಂಡು ಗುರುವಾರ ಮಧ್ಯಪ್ರದೇಶ ಪೊಲೀಸರಿಗೆ ಸಿಕ್ಕಿಬಿದ್ದಿರುವ ಕುಖ್ಯಾತ ರೌಡಿ ವಿಕಾಸ್ ದುಬೆ, ಅಂದು ರಾತ್ರಿ ಪೊಲೀಸರ ಶವಗಳನ್ನು ಪಾಳುಬಾವಿಗೆ ಎಸೆದು, ಬೆಂಕಿ ಹಚ್ಚಿ ಸಾಕ್ಷ್ಯ ನಾಶ ಮಾಡಬೇಕು ಎಂದುಕೊಂಡೆ. ಆದರೆ, ಅದು ಸಾಧ್ಯವಾಗದೆ ಅನಿವಾರ್ಯವಾಗಿ ಪರಾರಿಯಾಗಬೇಕಾಯಿತು ಎಂದು ಹೇಳಿಕೊಂಡಿದ್ದಾನೆ.
ಪೊಲೀಸರು ದಾಳಿ ಮಾಡುವ ಮಾಹಿತಿ ಆಪ್ತ ಪೊಲೀಸ್ ಸಿಬ್ಬಂದಿಯ ಮೂಲಕ ಸಿಕ್ಕಿತ್ತು. ಹಾಗಾಗಿ, ಶಸ್ತ್ರಸಜ್ಜಿತರಾಗಿ ಬರುವಂತೆ ನನ್ನ ಹಿಂಬಾಲಕರಿಗೆ ಸೂಚನೆ ರವಾನಿಸಿದೆ. ಆಯಕಟ್ಟಿನ ಜಾಗದಲ್ಲಿ ಕುಳಿತ ಅವರೆಲ್ಲರೂ ನನ್ನನ್ನು ಬಂಧಿಸಲು ಮುಂದಾದ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದರು ಎಂದು ತಿಳಿಸಿದ್ದಾನೆ.
ಇದನ್ನೂ ಓದಿ: ‘ಗ್ಯಾಂಗ್ಸ್ಟರ್ ವಿಕಾಸ್ ದುಬೆ ಬಂಧನದ ಬಗ್ಗೆಯೇ ಅನುಮಾನ…’
ಪೊಲೀಸರ ತಂಡ ತನ್ನನ್ನು ಎನ್ಕೌಂಟರ್ ಮಾಡಿ ಸಾಯಿಸಲು ಬರುತ್ತಿದೆ ಎಂಬ ಆತಂಕದಲ್ಲಿ ತಾನು ಪೊಲೀಸ್ ತಂಡದ ಮೇಲೆ ದಾಳಿ ಮಾಡಿದ್ದಾಗಿ ಆತ ಹೇಳಿದ್ದಾನೆ.
ದಾಳಿಯಲ್ಲಿ ಹತರಾದ ಪೊಲೀಸ್ ಸಿಬ್ಬಂದಿಯ ಶವಗಳನ್ನು ತಾನು ಅದಾಗಲೆ ಪಾಳುಬಾವಿಗೆ ಹಾಕಿದ್ದಾಗಿತ್ತು. ಪೆಟ್ರೋಲ್ ಸುರಿದು ಬೆಂಕಿ ಹೆಚ್ಚಬೇಕೆನ್ನುವಷ್ಟರಲ್ಲಿ ಅನಿವಾರ್ಯತೆ ಸೃಷ್ಟಿಯಾಯಿತು. ಹಾಗಾಗಿ ತಾನು ಪರಾರಿಯಾಗಿದ್ದಾಗಿ ಪುನರುಚ್ಚರಿಸಿದ್ದಾನೆ.
ನನಗೆ ಬಂದ ಮಾಹಿತಿಯ ಪ್ರಕಾರ ಪೊಲೀಸರು ಬೆಳಗ್ಗೆ ದಾಳಿ ಮಾಡಬೇಕಿತ್ತು. ದುರದೃಷ್ಟವಶಾತ್ ಅವರು ರಾತ್ರಿಯೇ ದಾಳಿ ಮಾಡಿಬಿಟ್ಟರು. ನಮಗೆ ಊಟ ಕೂಡ ಮಾಡಲೂ ಸಾಧ್ಯವಾಗಲಿಲ್ಲ ಎಂದು ಅಲವತ್ತುಕೊಂಡಿದ್ದಾನೆ.
10ನೇ ತರಗತಿಯಲ್ಲಿ ಪ್ರಥಮ ದರ್ಜೆಯ ತೇರ್ಗೆಡೆಯಾದ ಬಡವಿದ್ಯಾರ್ಥಿನಿಗೆ ಸಿಕ್ಕ ಉಡುಗೊರೆ ನೋಡಿ…