More

    ಅಧ್ಯಕ್ಷರಾಗಿ ಗುರುಪ್ರಸಾದ್ ಪಟೇಲ್ ಆಯ್ಕೆ

    ಗುಂಡ್ಲುಪೇಟೆ: ತಾಲೂಕಿನ ವೀರನಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಗುರುಪ್ರಸಾದ್ ಪಟೇಲ್, ಉಪಾಧ್ಯಕ್ಷರಾಗಿ ಅಂದ್ಲೇಗೌಡ ಅವಿರೋಧವಾಗಿ ಆಯ್ಕೆಯಾದರು.

    ಕಾಂಗ್ರೆಸ್ ಬೆಂಬಲಿತ 8 ಹಾಗೂ ಬಿಜೆಪಿ ಬೆಂಬಲಿತ 4 ನಿರ್ದೇಶಕರಿದ್ದ ಆಡಳಿತ ಮಂಡಳಿಗೆ ಭಾನುವಾರ ಆಯೋಜಿಸಿದ್ದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗುರುಪ್ರಸಾದ್ ಮತ್ತು ಅಂದ್ಲೇಗೌಡ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸಹಕಾರ ಇಲಾಖೆಯ ಅಧಿಕಾರಿ ಕೀರ್ತಿಕುಮಾರ್ ಅವಿರೋಧ ಆಯ್ಕೆ ಘೋಷಣೆ ಮಾಡಿದರು.

    ಚಾಮುಲ್ ಮಾಜಿ ಅಧ್ಯಕ್ಷ ನಂಜುಂಡಪ್ರಸಾದ್ ಹಾಗೂ ಕಾಡಾ ಮಾಜಿ ಅಧ್ಯಕ್ಷ ನಂಜಪ್ಪ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಧುಶಂಕರ್, ನಿರ್ದೇಶಕ ವಿ.ಎನ್.ಗಣೇಶ್, ಚಿದಾನಂದಸ್ವಾಮಿ, ಕುಮಾರ್, ಗುರುಮಲ್ಲಪ್ಪ, ವಿ.ಜಿ. ಬಸವಣ್ಣ, ಪ್ರಭುಸ್ವಾಮಿ, ಪ್ರಸನ್ನ, ಪುಟ್ಟನಂಜಮ್ಮ, ಮಹೇಶ್ವರಿ, ಶಿವಣ್ಣ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts