More

    ಗುರುಬೆಳದಿಂಗಳು ಫೌಂಡೇಶನ್‌ನಿಂದ ಗುರುತತ್ವ ಪಾಲನೆ

    ಮಂಗಳೂರು: ಗುರುಬೆಳದಿಂಗಳು ಫೌಂಡೇಶನ್ ಮೂಲಕ ನಾರಾಯಣಗುರುಗಳ ತತ್ವ ಮೂರ್ತರೂಪದಲ್ಲಿ ಕೆಲಸ ಮಾಡುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಉಷಾ ಮರೋಳಿ ಹೇಳಿದರು.

    ಬ್ರಹ್ಮಶ್ರೀ ನಾರಾಯಣಗುರುಗಳ 168ನೇ ಜನ್ಮದಿನದ ಸವಿನೆನಪಿನಲ್ಲಿ ಗುರುಬೆಳದಿಂಗಳು ಫೌಂಡೇಶನ್ ಕುದ್ರೋಳಿ ವತಿಯಿಂದ ಬೆಂಜನಪದವು ರಾಮನಗರದ ಭವಾನಿ ರವೀಂದ್ರ ಕುಟುಂಬಕ್ಕೆ ನವೀಕರಣಗೊಳಿಸಿದ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.

    ಆಸರೆ, ಆರೋಗ್ಯ, ಶಿಕ್ಷಣ ಎಂಬ ಧ್ಯೇಯದೊಂದಿಗೆ ಸಂಪೂರ್ಣವಾಗಿ ಈ ಮೂಲಕ ಗುರುತತ್ವ ಅನುಷ್ಠಾನಗೊಳ್ಳುತ್ತಿದೆ ಎಂದರು.

    ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಪೂಜಾರಿ ಮಾತನಾಡಿ, ಪದ್ಮರಾಜ್ ಆರ್. ನೇತೃತ್ವದ ಗುರುಬೆಳದಿಂಗಳು ಫೌಂಡೇಶನ್, ಜಾತಿಮತ ಭೇದವಿಲ್ಲದೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ ಎಂದರು.

    ಸ್ವ ಉದ್ಯೋಗ ತರಬೇತಿ: ಈ ಸಂದರ್ಭ ಕ್ಯಾಂಡಲ್ ತಯಾರಿ ಬಗ್ಗೆ ವನಿತಾ ಎಸ್., ದೀಪದ ಬತ್ತಿ ತಯಾರಿ ಬಗ್ಗೆ ಅನಿಲ್ ಕುಮಾರ್ ಕದ್ರಿ ಪ್ರಾತಕ್ಷಿಕೆ ಮೂಲಕ ಸ್ವ ಉದ್ಯೋಗ ಕಾರ್ಯಾಗಾರ ನಡೆಸಿಕೊಟ್ಟರು. ಅಶಕ್ತರಿಗೆ ಔಷಧ, ಫಲಾನುಭವಿಗಳಾದ ಶೃತಿ ಸಂಜೀವ ಶೆಟ್ಟಿ, ಮನೋಹರ್ ಆನಂದ, ಸುರೇಖಾ, ಸವಿತಾ ನಾರಾಯಣ ಕುಟುಂಬಗಳಿಗೆ ಹೊಲಿಗೆ ಯಂತ್ರ, ಮೋಟಾರು ವಿತರಣೆ ಮಾಡಲಾಯಿತು.

    ಗುರುಬೆಳದಿಂಗಳು ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ಆರ್. ಅಧ್ಯಕ್ಷತೆ ವಹಿಸಿದ್ದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಉದ್ಯಮಿಗಳಾದ ಕಿಶೋರ್ ದಂಡೆಕೇರಿ, ಶ್ರೀನಿವಾಸ ಕೂಳೂರು, ವಿಷ್ಣುದಾಸ್, ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಸಜಿಪ, ಗೆಜ್ಜೆಗಿರಿ ಕ್ಷೇತ್ರದ ಉಪಾಧ್ಯಕ್ಷ ರವಿ ಚಿಲಿಂಬಿ, ವಕ್ತಾರ ರಾಜೇಂದ್ರ ಚಿಲಿಂಬಿ, ಗುರುಬೆಳದಿಂಗಳು ಫೌಂಡೇಶನ್ ಉಪಾಧ್ಯಕ್ಷ ರಘುನಾಥ ಮಾಬಿಯಾನ್, ಕಾರ್ಯದರ್ಶಿ ರಾಜೇಶ್ ಸುವರ್ಣ ಬಂಟ್ವಾಳ ಮೊದಲಾದವರು ಉಪಸ್ಥಿತರಿದ್ದರು. ಗಜೇಂದ್ರ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಸುಮಾಕರ್ ಕಾರ್ಯಕ್ರಮ ನಿರೂಪಿಸಿದರು. ಬಾಲಚಂದ್ರ ವಂದಿಸಿದರು.

    ಕಳೆದ ಒಂದುವರೆ ವರ್ಷಗಳಿಂದ ಗುರುಬೆಳದಿಂಗಳು ಫೌಂಡೇಶನ್ ಮೂಲಕ ಶಿಕ್ಷಣ, ಆರೋಗ್ಯ, ಆಸರೆ ವಿಭಾಗದಲ್ಲಿ 67.40ಲಕ್ಷ ರೂ. ವೆಚ್ಚದಲ್ಲಿ ಸಮಾಜಮುಖಿ ಕಾರ್ಯ ನಡೆಸಲಾಗಿದೆ. ಜಾತಿ, ಮತ, ಭೇದವಿಲ್ಲದೆ ಸಮಾಜದ ಎಲ್ಲ ವರ್ಗದ ಜನರ ಜತೆಗೆ ಸದಾ ನಮ್ಮ ಸಂಸ್ಥೆ ಇರುತ್ತದೆ.
    – ಪದ್ಮರಾಜ್ ಆರ್. ಗುರುಬೆಳದಿಂಗಳು ಫೌಂಡೇಶನ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts