More

    ಚಿತ್ರಮಂದಿರದಿಂದ ಹೊರಟ ‘ಗುರು ಶಿಷ್ಯರು’ ಸದ್ಯದಲ್ಲೇ ಜೀ 5ಗೆ …

    ಬೆಂಗಳೂರು: ಶರಣ್​ ಅಭಿನಯದ ‘ಗುರು ಶಿಷ್ಯರು’ ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಮೆಚ್ಚುಗೆಯೇ ಸಿಕ್ಕಿತ್ತು. ವಿಮರ್ಶಕರಿಂದಲೂ ಪ್ರಶಂಸೆ ವ್ಯಕ್ತವಾಗಿತ್ತು. ಆದರೆ, ಬಾಕ್ಸ್​-ಆಫೀಸ್​ನಲ್ಲಿ ಮಾತ್ರ ಚಿತ್ರ ಅಷ್ಟೇನೂ ಕರಾಮತ್ತು ಮಾಡಲಿಲ್ಲ. ಚಿತ್ರವು ಒಳ್ಳೆಯ ಓಪನಿಂಗ್​ ಪಡೆದರೂ, ನಂತರದ ದಿನಗಳಲ್ಲಿ ಹೆಚ್ಚು ಸದ್ದು ಮಾಡಲಿಲ್ಲ. ಎರಡ್ಮೂರು ವಾರಗಳ ನಂತರ ಚಿತ್ರಮಂದಿರಗಳಿಂದ ಹೊರಟ ‘ಗುರು ಶಿಷ್ಯರು’ ಇದೀಗ ಜೀ 5ನಲ್ಲಿ ದರ್ಶನ ಕೊಡುವುದಕ್ಕೆ ಸಜ್ಜಾಗಿದ್ದಾರೆ.

    ಇದನ್ನೂ ಓದಿ: ನ.18ಕ್ಕೆ ಅಮೇಜಾನ್​ ಪ್ರೈಮ್​ನಲ್ಲಿ ರಿಷಭ್​ ಶೆಟ್ಟಿ ಅಭಿನಯದ ‘ಕಾಂತಾರ’?

    ಹೌದು, ‘ಗುರು ಶಿಷ್ಯರು’ ಚಿತ್ರವು ಜೀ 5ನಲ್ಲಿ ಇದೇ ನ.11ರಂದು ಸ್ಟ್ರೀಮ್​ ಆಗಲಿಕ್ಕೆ ಸಿದ್ಧವಾಗಿದ್ದು, ಈಗಾಗಲೇ ಸೋಷಿಯಲ್​ ಮೀಡಿಯಾದಲ್ಲಿ ಪ್ರಚಾರ ಪ್ರಾರಂಭವಾಗಿದೆ. ಇದೊಂದು ಖೋಖೋ ಕುರಿತ ಚಿತ್ರವಾಗಿದ್ದು, ದೇಸಿ ಕ್ರೀಡೆಯ ಮಹತ್ವವನ್ನು ಸಾರುತ್ತದೆ.

    ‘ಗುರು ಶಿಷ್ಯರು’ ಚಿತ್ರದ ವಿಶೇಷತೆಯೆಂದರೆ, ಇದರಲ್ಲಿ ಹಲವು ನಟರ ಮಕ್ಕಳು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವುದು. ಶರಣ್​ ಮಗ ಹೃದಯ್​, ‘ನೆನಪಿರಲಿ’ ಪ್ರೇಮ್​ ಮಗ ಏಕಾಂತ್​, ರವಿಶಂಕರ್​ ಗೌಡ ಮಗ ಸೂರ್ಯ, ನವೀನ್​ ಕೃಷ್​ ಮಗ ಹರ್ಷಿತ್​, ಬುಲೆಟ್​ ಪ್ರಕಾಶ್​ ಮಗ ರಕ್ಷತ್​ ಅಲ್ಲದೆ ಇನ್ನೊಂದಿಷ್ಟು ಹೊಸ ಪ್ರತಿಭೆಗಳು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

    ಇದನ್ನೂ ಓದಿ: ‘ಉತ್ತರಕಾಂಡ’ ಚಿತ್ರದಲ್ಲಿ ರಮ್ಯಾ? ಸ್ಯಾಂಡಲ್​ವುಡ್​ನಲ್ಲಿ ಹೀಗೊಂದು ಸುದ್ದಿ …

    ‘ಗುರು ಶಿಷ್ಯರು’ ಚಿತ್ರದಲ್ಲಿ ಶರಣ್​, ನಿಶ್ವಿಕಾ ನಾಯ್ಡು, ದತ್ತಣ್ಣ, ಸುರೇಶ್​ ಹೆಬ್ಳೀಕರ್​ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಅಪೂರ್ವ ಕಾಸರವಳ್ಳಿ ಈ ಚಿತ್ರದಲ್ಲಿ ವಿಲನ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಜನೀಶ್​ ಲೋಕನಾಥ್​ ಸಂಗೀತವಿರುವ ಈ ಚಿತ್ರವನ್ನು ಜಡೇಶ್​ ಹಂಪಿ ನಿರ್ದೇಶನ ಮಾಡಿದ್ದಾರೆ.

    ಮುಂದಿನ ವರ್ಷ ಪ್ರಯಾಣ ಹೊರಡಲಿದ್ದಾರೆ ಪ್ರಿಯಾಂಕಾ, ಆಲಿಯಾ ಮತ್ತು ಕತ್ರಿನಾ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts