ಮುಂಬೈ : ಬಾಲಿವುಡ್ ಚಿತ್ರ ನಿರ್ಮಾಪಕ, ಟಿ-ಸೀರಿಸ್ ಮ್ಯೂಸಿಕ್ ಕಂಪೆನಿ ಮಾಲೀಕರಾಗಿದ್ದ ಗುಲ್ಶನ್ ಕುಮಾರ್ ಅವರ ಕೊಲೆ ಪ್ರಕರಣದ ಆರೋಪಿ ಅಬುಲ್ ರೌಫ್ ಮರ್ಚೆಂಟ್ಅನ್ನು ತಪ್ಪಿತಸ್ಥನೆಂದು ಘೋಷಿಸಿದ್ದ ಸೆಷನ್ಸ್ ಕೋರ್ಟ್ ತೀರ್ಪನ್ನು ಬಾಂಬೆ ಹೈಕೋರ್ಟ್ ಎತ್ತಿಹಿಡಿದಿದೆ. ಮಹಾರಾಷ್ಟ್ರ ಸರ್ಕಾರದ ಅಪೀಲಿನ ಮೇರೆಗೆ ಸೆಷನ್ಸ್ ಕೋರ್ಟ್ ಖುಲಾಸೆ ನೀಡಿದ್ದ ಮತ್ತೊಬ್ಬ ಆರೋಪಿ ಅಬ್ದುಲ್ ರಷೀದ್ಅನ್ನು ಕೂಡ ಅಪರಾಧಿ ಎಂದು ತೀರ್ಪು ನೀಡಿದೆ.
ಉದ್ಯಮದಲ್ಲಿನ ದ್ವೇಷದಿಂದ ಈ ಕೊಲೆ ಮಾಡಿಸಿದ್ದರು ಎಂದು ಆರೋಪಿಸಲಾಗಿದ್ದ ಟಿಪ್ಸ್ ಇಂಡಸ್ಟ್ರೀಸ್ನ ಮಾಲೀಕ ರಮೇಶ್ ತೌರಾನಿ ಅವರ ಖುಲಾಸೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಖುಲಾಸೆಗೊಳಿಸಿದ್ದ ಸೆಷನ್ಸ್ ಕೋರ್ಟ್ನ 2002 ರ ಏಪ್ರಿಲ್ 29 ರ ತೀರ್ಪಿನ ವಿರುದ್ಧ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ. ಅಪರಾಧಿಗಳೆಂದು ಸಾಬೀತಾದ ದಾವೂದ್ ಇಬ್ರಾಹಿಂನ ಸಹಚರ ಎನ್ನಲಾದ ರೌಫ್ ಮರ್ಚೆಂಟ್ ಮತ್ತು ಅಬ್ದುಲ್ ರಶೀದ್ಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಲಾಗಿದೆ.
ಇದನ್ನೂ ಓದಿ: ಕೋಲಾರದಲ್ಲಿ ಒಂದೂವರೆ ವರ್ಷದ ಮಗಳನ್ನು ಕೊಂದು ತಾಯಿ ಆತ್ಮಹತ್ಯೆ!
ಖ್ಯಾತಿ ಪಡೆದಿದ್ದ ಚಿತ್ರೋದ್ಯಮಿ ಗುಲ್ಶನ್ ಕುಮಾರ್ ಅವರಿಗೆ ಅಂಡರ್ವರ್ಲ್ಡ್ನಿಂದ ಜೀವ ಬೆದರಿಕೆ ಬಂದಿತ್ತು ಎನ್ನಲಾಗಿದೆ. ತದನಂತರ 1997 ರ ಆಗಸ್ಟ್ 12 ರಂದು ಮುಂಬೈ ನಗರದ ಜುಹುನಲ್ಲಿ ದೇವಸ್ಥಾನದಿಂದ ಹೊರಬರುತ್ತಿದ್ದ ಕುಮಾರ್ ಅವರನ್ನು, ಹಾಡುಹಗಲೇ, ಗುಂಡಿಕ್ಕಿ ಸಾಯಿಸಲಾಗಿತ್ತು. ರೌಫ್ ಮರ್ಚೆಂಟ್ ಮತ್ತು ಅಬ್ದುಲ್ ರಶೀದ್ 16 ಬುಲೆಟ್ಗಳನ್ನು ಹಾರಿಸಿದ್ದು, ಕುಮಾರ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು ಎನ್ನಲಾಗಿದೆ. (ಏಜೆನ್ಸೀಸ್)
ಜೂಡೋ ಕ್ಲಾಸಲ್ಲಿ ಪೆಟ್ಟುತಿಂದು ಕೋಮಾಗೆ ಜಾರಿದ್ದ ಬಾಲಕನ ಸಾವು; ಶಿಕ್ಷಕನಿಂದ ನಡೆದಿತ್ತು ಘೋರ ಅನರ್ಥ!