More

    ಜಯಕ್ಕಾಗಿ ಭರ್ಜರಿ ಹೋರಾಟ


    ದುಗ್ಗಳ ಸದಾನಂದ ನಾಪೋಕ್ಲು :
    ಚೆರಿಯ ಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ ನಮ್ಮೆಯಲ್ಲಿ ಸೋಮವಾರ ವಿವಿಧ ತಂಡಗಳ ನಡುವೆ ಬಿರುಸಿನ ಸ್ಪರ್ಧೆ ನಡೆಯಿತು. ತೀತಮಾಡ ಹಾಗೂ ಕುಂಡ್ಯೋಳಂಡ ವಿರುದ್ಧ ನಡೆದ ಪಂದ್ಯದಲ್ಲಿ ತೀತಮಾಡ 5-2 ಅಂತರದ ಜಯ ಗಳಿಸಿತು.


    ಮಂಡೇಟಿರ ವಿರುದ್ಧ ಮೇವಡ 2-0 ಅಂತರದ ಜಯ ಗಳಿಸಿದರೆ ಚೆಕ್ಕೆರ ತಂಡ ಪೊಂಜಂಡ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿತು. ಚೆಕ್ಕೇರ ಆದರ್ಶ, ಉತ್ತಯ್ಯ ಹಾಗೂ ಆಕಾಶ್ ಹೊಡೆದ ಆರು ಗೋಲುಗಳಿಂದ ಚೆಕ್ಕೆರ ತಂಡ ಪೊಂಜಂಡ ವಿರುದ್ಧ ಭರ್ಜರಿ ಜಯ ಸಾಧಿಸಿತು.


    ಚಂದುರ ತಂಡಕ್ಕೆ ಕಾಳಿಮಾಡ ವಿರುದ್ಧ 6-5 ಅಂತರದ ಜಯ ಲಭಿಸಿತು. ಸಮಬಲದ ಹೋರಾಟ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿತು. ಬಳಿಕ ನಡೆದ ಟೈ ಬ್ರೇಕರ್‌ನಲ್ಲಿ ಚಂದುರ 6-5 ಅಂತರದಿಂದ ಕಾಳಿ ಮಾಡ ವಿರುದ್ಧ ಜಯ ಸಾಧಿಸಿತು. ಕಂಬಿರಂಡ ಪುದಿಯೋಕ್ಕಡ ತಂಡ, ಬೊಟ್ಟಂಗಡ ವಿರುದ್ಧ 3-0 ಅಂತರದಿಂದ, ಕೊಂಗೆಟಿರ, ಅಲ್ಲಾರಮಡ ವಿರುದ್ಧ 4-0 ಅಂತರದಿಂದ, ಅಮ್ಮಣಿಚಂಡ, ಚೋಕಿರ ವಿರುದ್ಧ 3-1 ಅಂತರದಿಂದ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿದವು.


    ಚೇಂದಂಡ ತಂಡವು ಕಂಗಂಡ ವಿರುದ್ಧ 3- 0 ಅಂತರದ ಜಯ ಗಳಿಸಿತು. ಕಾಂಡೇರ ಮತ್ತು ಕೋಡಿಮಣಿಯಂಡ ತಂಡಗಳ ನಡುವೆ ರೋಚಕ ಸ್ಪರ್ಧೆ ಏರ್ಪಟ್ಟಿತು. ಟೈಬ್ರೇಕರ್‌ನಲ್ಲಿ ಕೋಡಿಮಣಿಯಂಡ ಕಾಂಡೇರ ವಿರುದ್ಧ 5-4 ಅಂತರದ ಜಯ ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು. ಕೇಲೆಟಿರ ಪಾಲಂದಿರ 3- 0 ಅಂತರದಿಂದ ಜಯ ಗಳಿಸಿದರೆ ಮುಕ್ಕಾಟಿರ (ಬೋಂದ) ತಂಡವು ಅಳಮೇಂಗಡ ವಿರುದ್ಧ 5-4 ಅಂತರದ ಜಯ ಸಾಧಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts