ಹಾವೇರಿ: ಹಾನಗಲ್ ಬೈಎಲೆಕ್ಷನ್ ಘೋಷಣೆಯಾಗಿ ನೀತಿ ಸಂಹಿತೆ ಜಾರಿ ಇದ್ದರೂ, ಗ್ರಾಮ ಪಂಚಾಯಿತಿ ವತಿಯಿಂದ ಜನರಿಗೆ ಕುಕ್ಕರ್ ಹಂಚಿರುವ ಪ್ರಸಂಗ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬೈಚುವಳ್ಳಿ ಗ್ರಾಮದಲ್ಲಿ ನಡೆದಿದೆ. ಚುನಾವಣೆ ಹಿನ್ನೆಲೆಯಲ್ಲಿ ಪಂಚಾಯಿತಿ ಅಧ್ಯಕ್ಷರು ಮತ್ತು ಬೆಂಬಲಿಗರು ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಬೈಚುವಳ್ಳಿ ಗ್ರಾಮ ಪಂಚಾಯತಿಯು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ, ಶೇಕಡಾ 5 ರ ಅನುದಾನದಲ್ಲಿ ದಿವ್ಯಾಂಗರಿಗೆ ಕುಕ್ಕರ್ ಹಂಚಿಕೆ ಮಾಡಿದೆ. ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ತಾವೇ ಠರಾವ್ ಮಾಡಿಕೊಂಡು ತಾವೇ ಮನೆಮನೆಗೆ ಹೋಗಿ ಕುಕ್ಕರ್ ವಿತರಣೆ ಮಾಡಿದ್ದಾರೆ. ನಿನ್ನೆ ಸರ್ಕಾರಿ ರಜೆ ಇದ್ದರೂ ಗ್ರಾ.ಪಂ. ಸಿಬ್ಬಂದಿ ಕುಕ್ಕರ್ ಹಂಚಿಕೆಯ ಕೆಲಸ ಕೈಗೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಐಷಾರಾಮಿ ಹಡಗಿನಲ್ಲಿ ಹೈಟೆಕ್ ಡ್ರಗ್ಸ್ ಪಾರ್ಟಿ ಪ್ರಕರಣ: ಶಾರುಖ್ ಪುತ್ರನ ಬಂಧನ ಸಾಧ್ಯತೆ..!
ನಾಗರಾಜ್ ರಜಪೂತ್ ಎಂಬ ಪಿಡಿಓರಿಂದ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾ.ಪಂ. ಅಧಿಕಾರಿಗಳ ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಗ್ರಾಮಸ್ಥರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಅಕ್ಕಿನೇನಿ ಕುಟುಂಬ ನೀಡಲು ಮುಂದಾದ ಜೀವನಾಂಶ ಎಷ್ಟು ಗೊತ್ತಾ?! ಏನೆಂದರು ಸಮಂತಾ?
VIDEO| ಮಹಾತ್ಮ ಗಾಂಧಿ ಚಿತ್ರ, ಸಂದೇಶಗಳೊಂದಿಗೆ ಕಂಗೊಳಿಸಿದ ಬುರ್ಜ್ ಖಲೀಫ