ಮಂಗಳೂರು:ಕೆಂಜಾರಿನಲ್ಲಿ ಕೋಸ್ಟ್ಗಾರ್ಡ್ ಅಕಾಡೆಮಿಗೆಂದು ಗುರುತಿಸಿ ಹಸ್ತಾಂತರಿಸುವ ಜಮೀನಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಗೋಶಾಲೆಯನ್ನು ಜಿಲ್ಲಾಡಳಿತ ನಿರ್ದೇಶನದ ಅನ್ವಯ ತೆರವುಗೊಳಿಸಲಾಗಿದೆ.ಕೆಲ ದಿನ ಹಿಂದೆಯಷ್ಟೇ ದ.ಕ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಈ ಕುರಿತ ಚರ್ಚೆ ನಡೆದ ವೇಳೆ ಗೋಶಾಲೆ ಅಕ್ರಮವಾಗಿದ್ದು ಅದನ್ನು ತೆರವುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ತಿಳಿಸಿದ್ದರು. ಅಲ್ಲದೆ ಗೋವುಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದೂ ತಿಳಿಸಿದ್ದರು.ಅದರಂತೆ ಗುರುವಾರ ಪೊಲೀಸ್ ನೆರವಿನೊಂದಿಗೆ ಬುಲ್ಡೋಜರ್ ಬಳಸಿ ಗೋಶಾಲೆಯನ್ನು ತೆರವುಗೊಳಿಸಲಾಗಿದೆ.