ಬೆಂಗಳೂರು: ಯಾವುದೇ ನಟನಿಗೆ ಅತ್ಯಂತ ಸವಾಲಿನ ಪಾತ್ರವೆಂದರೆ ಕುರುಡನದ್ದು. ಕಣ್ಣಿದ್ದೂ ಕಾಣಿಸದವರಂತೆ ಅಂಧನ ಪಾತ್ರಗಳಲ್ಲಿ ಈಗಾಗಲೇ ಹಲವಾರು ನಾಯಕರು ಅಭಿನಯಿಸಿ ಮೆಚ್ಚುಗೆ ಗಳಿಸಿದ್ದಾರೆ. ಆ ಪೈಕಿ ಈಗಿನ ಸರದಿ ಗೋಲ್ಡನ್ ಸ್ಟಾರ್ ಗಣೇಶ್ ಅವರದು.
ಹೌದು.. ಗೋಲ್ಡನ್ ಸ್ಟಾರ್ ಗಣೇಶ್ ಈಗ ‘ಸಖತ್’ ಆಗಿ ಕಾಣಿಸಿಕೊಳ್ಳಲು ಕುರುಡನಾಗಿದ್ದಾರೆ. ಆ ವಿಷಯವನ್ನು ಖುದ್ದು ಗಣೇಶ್ ಇದೀಗ ಅಭಿಮಾನಿಗಳು ಹಾಗೂ ಸಿನಿಪ್ರಿಯರೊಂದಿಗೆ ಹಂಚಿಕೊಂಡಿದ್ದಾರೆ. ಕಣ್ಣಿಗೆ ಕಪ್ಪುಕನ್ನಡ ಹಾಕಿಕೊಂಡು ಕಟಕಟೆಯಲ್ಲಿ ಅಂಧನಂತೆ ನಿಂತ ದೃಶ್ಯವೊಂದರ ಫೋಟೋವೊಂದನ್ನು ಅವರು ಟ್ವಿಟರ್ನಲ್ಲಿ ಹಂಚಿಕೊಂಡು ತಮ್ಮ ಪಾತ್ರ ಏನೆಂಬ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ.
‘ನಾಯಕನಾಗಿ 15 ವರ್ಷಗಳಿಂದ ನಿಮ್ಮ ನೋಟಗಳಿಗೆ ಸೆರೆಯಾಗಿದ್ದೇನೆ. ಮೊದಲ ಬಾರಿಗೆ ನನ್ನ ನೋಟವನು ಕಟ್ಟಿಟ್ಟು ಕಾಣಿಸಿಕೊಳ್ಳುತ್ತಿದ್ದೇನೆ. ಮುಚ್ಚಿಟ್ಟ ಕಂಗಳಿಗೆ ಬಿಚ್ಚಿಟ್ಟ ಪ್ರೀತಿಯ ಬೆಳಕ ಚೆಲ್ಲಿ ಹಾರೈಸಿ’ ಎಂಬುದಾಗಿ ಗಣೇಶ್ ವಿನಂತಿಸಿಕೊಂಡಿದ್ದಾರೆ.
‘ಸಿಂಪಲ್’ ಸುನಿ ನಿರ್ದೇಶನದ ‘ಸಖತ್’ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸುತ್ತಿರುವ ಗಣೇಶ್ ಇದೇ ಮೊದಲ ಬಾರಿ ಇಂಥದ್ದೊಂದು ಸಾಹಸಕ್ಕೆ ಮುಂದಾಗಿದ್ದಾರೆ. ಈ ಮೂಲಕ ಕಣ್ಣಿದ್ದೂ ಕಾಣದಂತೆ ಅಭಿನಯಿಸಿ ಕಣ್ಮನ ಸೆಳೆಯಲು ಸಜ್ಜಾಗಿದ್ದಾರೆ. ಸುಪ್ರೀತ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ಗಣೇಶ್ಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ಅಭಿನಯಿಸುತ್ತಿದ್ದಾರೆ.
‘ಕರ್ನಾಟಕದ ಅಳಿಯ’ನ ಜತೆ ರಾಘವೇಂದ್ರ ರಾಜ್ಕುಮಾರ್ ಬ್ಯಾಟಿಂಗ್; ಚೇತರಿಸಿಕೊಂಡು ಫೀಲ್ಡ್ಗಿಳಿದರು ರಾಘಣ್ಣ