More

    ಗಂಡನ ಮನೆಗೆ ಹೋಗವ್ವಾ… ಎಂದು ತಾಯಿ ಬುದ್ಧಿಮಾತು ಹೇಳಿದ್ದೇ ತಪ್ಪಾ? ಮನನೊಂದು ಸಾವಿನ ಮನೆಯ ಕದ ತಟ್ಟಿದ ಮಗಳು

    ಕುಣಿಗಲ್​: ‘ಬಾಣಂತನ ಮುಗೀತು, ಗಂಡನ ಮನೆಗೆ ಹೋಗವ್ವಾ…’ ಎಂದು ಮಗಳಿಗೆ ತಾಯಿ ಬುದ್ಧಿ ಹೇಳಿದ್ದಕ್ಕೆ ಬೇಸರಗೊಂಡ ಮಗಳು ಸಾವಿನ ಮನೆಯ ಕದ ತಟ್ಟಿದ್ದಾಳೆ. ಇವಳ ದುಡುಕಿಗೆ ಪುಟ್ಟ ಕಂದ ಅನಾಥವಾಗಿದೆ.

    ಇಂತಹ ಘಟನೆ ತುಮಕೂರು ಜಿಲ್ಲೆ ಕುಣಿಗಲ್​ ಪಟ್ಟಣದ ಉಪ್ಪಾರಬೀದಿ (ಮಾವಿನತೋಪು)ಯಲ್ಲಿ ನಡೆದಿದೆ. ಐಶ್ವರ್ಯಾ(20) ಮೃತೆ. ಅಮೃತೂರಿನ ಅನಿಲ್​ಕುಮಾರ್ ಎಂಬುವರ ಜತೆ ಐಶ್ವರ್ಯಾಗೆ ಮದುವೆ ಮಾಡಲಾಗಿತ್ತು. 2021ರಲ್ಲಿ ಐಶ್ವರ್ಯ ಗರ್ಭಿಣಿಯಾಗಿದ್ದಳು. ಈ ವೇಳೆ ಆಕೆಯ ಮೈದುನ ಹಾಗೂ ನಾದಿನಿಗೆ ಕರೊನಾ ಸೋಂಕು ತಗುಲಿತ್ತು. ಮುಂಜಾಗ್ರತೆಯಾಗಿ ಐಶ್ವರ್ಯಾಳನ್ನು ಪತಿ ಅನಿಲ್​ಕುಮಾರ್​ ತವರು ಮನೆಗೆ ಬಿಟ್ಟು ಹೋಗಿದ್ದರು.

    ಐಶ್ವರ್ಯಾಗೆ ಇಲ್ಲಿಯೇ ಹೆರಿಗೆಯಾಗಿತ್ತು. ಬಾಣಂತನ ಮುಗಿದ ನಂತರ ಗಂಡನ ಮನೆಗೆ ಹೋಗುವಂತೆ ಮಗಳಿಗೆ ತಾಯಿ ಬುದ್ಧಿವಾದ ಹೇಳುತ್ತಿದ್ದರು. ಇದರಿಂದ ಬೇಸತ್ತ ಐಶ್ವರ್ಯ, ಸೆ.12ರಂದು ಮನೆಯಲ್ಲಿ ಯಾರೂ ಇಲ್ಲದಿದ್ದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕುಣಿಗಲ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಜಾತ್ರೆಯಂತಾದ ಒಕ್ಕಲಿಗರ ವಧು-ವರರ ಸಮಾವೇಶ: 25 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ, ವಧು ನೋಂದಣಿ ಸಂಖ್ಯೆ ಕೇವಲ 250…

    ರಾತ್ರೋರಾತ್ರಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್​ ಬಂಧನ

    ಸೀಬೆ ಬೆಳೆದ ಇಂಜಿನಿಯರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts