More

    ಕಬ್ಬು ಬೆಳೆಗಾರರಿಗೆ ಸರ್ಕಾರ ನಿಗದಿತ ಬೆಲೆ ನೀಡಿ

    ರಾಜ್ಯ ಸರ್ಕಾರದಿಂದ ಕಬ್ಬು ಬೆಳೆಗಾರರಿಗೆ ನಿಗದಿಯಾರಿಗಿರುವ ಬೆಲೆಯನ್ನು ಸಂಪೂರ್ಣವಾಗಿ ರೈತರಿಗೆ ತಲುಪಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೂಚಿಸಿದರು.

    ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಕ್ಕರೆ ಕಾರ್ಖಾನೆಯ ನಿರ್ವಾಹಕರು ಮತ್ತು ರೈತ ಮುಖಂಡರ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ರೈತರು ಬೆಳೆಯುತ್ತಿರುವ ಬೆಳೆಗಳಿಗೆ ಸೂಕ್ತವಾದ ದರ ಸಿಗದೇ ಇರುವುದು ರೈತರ ಧರಣಿಗಳಿಗೆ ಕಾರಣವಾಗುತ್ತವೆ. ಆದ್ದರಿಂದ ರೈತರಿಗೆ ಸರಿಯಾದ ರೀತಿಯಲ್ಲಿ ನಿಗದಿಯಾಗಿರುವ ಬೆಲೆಗಳನ್ನು ನೀಡಬೇಕು. ಜಿಲ್ಲೆಯಲ್ಲಿ ರೈತರಿಗಾಗುತ್ತಿರುವ ತೊಂದರೆಗಳ ಕುರಿತು ಸಭೆಯಲ್ಲಿ ಚರ್ಚಿಸಿದರು. ರೈತರು ಬೆಳೆಯುತ್ತಿರುವ ಕಬ್ಬಿಗೆ ಉತ್ತಮವಾದ ಬೆಲೆ ಸಿಗದೆ ರೈತರು ಸಂಕಷ್ಟಕ್ಕೇ ಇಡಾಗುತ್ತಿದ್ದಾರೆ. ಸರ್ಕಾರದಿಂದ ನಿಗದಿಯಾಗಿರುವ ಸಂಪೂರ್ಣ ಹಣವನ್ನು ರೈತರಿಗೆ ನೀಡಬೇಕೆಂದು ತಿಳಿಸಿದರು.

    ಕಬ್ಬಿನ ಕಟಾವಿನ ಸಂದರ್ಭದಲ್ಲಿ ರೈತರಿಗೆ ಆಗುತ್ತಿರುವ ನಷ್ಟವನ್ನು ಸರಿಪಡಿಸಲು ಕಾರ್ಖಾನೆಗಳಿಂದಲೇ ನೇರವಾಗಿ ಕಬ್ಬನ್ನು ಕಟಾವು ಮಾಡಿಕೊಳ್ಳುವಂತೆ ಸ್ಟೇಟ್ ಕಮಿಷನ್ ವರದಿಯನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು.

    ಕಬ್ಬು ಬೆಳೆಗಾರರು ಮತ್ತು ಕಾರ್ಖಾನೆಗಳ ದ್ವಿಪಕ್ಷ ಒಪ್ಪಂದದಲ್ಲಿ ಅಗತ್ಯವಾದ ಅಂಶಗಳನ್ನು ಸೇರಿಸಲು ಕ್ರಮವಹಿಸಲಾಗುವುದು ಮತ್ತು ಎಕ್ಸ್ ಫೀಲ್ಡ್ ರೀತಿ ರೈತರ ಜಮೀನಿನಲ್ಲಿ ಕಾರ್ಖಾನೆಯವರು ನೇರವಾಗಿ ಕಬ್ಬನ್ನು ಕಟಾವು ಮಾಡಬೇಕು. ಕಟಾವು ಸಂದರ್ಭದಲ್ಲಿ ರೈತರಿಗೆ ಆಗುತ್ತಿರುವ ನಷ್ಟವನ್ನು ತಪ್ಪಿಸಲು ಕಟಾವು ಮಾಡುವ ಲೇಬರ್ಸ್‌ಗಳ ಜೊತೆ ಕಾರ್ಖಾನೆ ಮಾಲೀಕರು ಅಥವಾ ವ್ಯವಸ್ಥಾಪಕರು ನೇರವಾಗಿ ನಿಗದಿತವಾದ ಕೂಲಿಯೊಂದಿಗೆ ಒಪ್ಪಂದ ಮಾಡಿಕೊಂಡು ರೈತರಿಗೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸಿ ಎಂದು ತಿಳಿಸಿದರು.

    ಕಬ್ಬು ಬೆಳೆಗೆ ಸಂಬಟಧಿಸಿದಟತೆ ಸರ್ಕಾರದಿಂದ 150 ರೂಪಾಯಿ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದ್ದು ಆ ಹಣವನ್ನು ಸಂಬಂಧಿತ ರೈತರ ಖಾತೆಗೆ ಶೀಘ್ರದಲ್ಲಿ ಜಮೆ ಮಾಡಬೇಕೆಂದು ಕಾರ್ಖಾನೆ ನಿರ್ವಾಹಕ ಮಂಡಳಿಗೆ ಸೂಚಿಸಲಾಯಿತು.

    ‘ಒಂದು ಕಾರ್ಖಾನೆಯಿಂದ ಮತ್ತೊಂದು ಕಾರ್ಖಾನೆಗೆ 15 ಕಿಲೋಮೀಟರ್ ಅಂತರವನ್ನು ಒಳಗೊಂಡಿರಬೇಕು ಎಂಬ ಅಂಶವನ್ನು ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಪರಿಶೀಲಿಸದೆ ರೈತರಿಗೆ ತೊಂದರೆಗಳಾಗುತ್ತಿವೆ. ಕಬ್ಬಿನ ಬೆಳೆಯನ್ನು 12 ರಿಂದ 14 ತಿಂಗಳ ಒಳಗಡೆ ಕಟಾವು ಮಾಡಬೇಕಿದೆ ಆದರೆ ಕಟಾವಿನ ಸಂದರ್ಭದಲ್ಲಿ ಕೂಲಿ ಆಳುಗಳ ಕೊರತೆಯು ನಮಗೆ ಹೆಚ್ಚಿನದಾಗಿದೆ. ಕಬ್ಬು ಕಡಿದ ನಂತರದಲ್ಲಿ ಕಾರ್ಖಾನೆಗಳಿಂದ ನ್ಯಾಯಯುತವಾದ ಬೆಲೆಗಳು ದೊರೆಯುತ್ತಿಲ್ಲ, ರೈತರಿಗೆ ತುಂಬಾ ಸಮಸ್ಯೆಗಳಾಗುತ್ತವೆ. ನಿಯಮಾನಸಾರವಾಗಿ ಕಬ್ಬು ಖರೀದಿ ಮಾಡಿದ 14 ದಿನದ ಒಳಗಡೆ ರೈತರಿಗೆ ಹಣವನ್ನು ಪಾವತಿ ಮಾಡಬೇಕು ಅಧಿಕಾರಿಗಳ ನಿರ್ಲಕ್ಷದಿಂದ ತಿಂಗಳುಗಳಾದರೂ ಕೂಡ ರೈತರಿಗೆ ಕಬ್ಬಿನ ಹಣ ದೊರೆಯುತ್ತಿಲ್ಲ, ಮುಂದಿನ ದಿನಗಳಲ್ಲಿ ಪ್ರತಿ ಟನ್ ಕಬ್ಬಿಗೆ ಬಾಕಿ ಇರುವ 150 ಬೆಂಬಲ ಬೆಲೆಯನ್ನು ಕೂಡಲೇ ಪಾವತಿ ಮಾಡಬೇಕು’ ಎಂದು ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

    ರೈತ ಮುಖಂಡರಾದ ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ಬೊಕ್ಕಳ್ಳಿ ನಂಜುಂಡಸ್ವಾಮಿ, ನಾಗನಹಳ್ಳಿ ವಿಜಯೇಂದ್ರ, ನೇತ್ರಾವತಿ, ಹೆಜ್ಜಿಗೆ ಪ್ರಕಾಶ್, ಎನ್. ಪುನೀತ್ ಸೇರಿದಂತೆ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts