More

    ಬಿಎಸ್‌ವೈ ಜಗ್ಗಿಸುವ ಶಕ್ತಿ ನೀಡಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

    ಬರಗೂರು: ವಿಧಾನಸೌಧದಲ್ಲಿ ನನ್ನ ಹಾಗೂ ಸಿದ್ದರಾಮಯ್ಯ ಪಕ್ಕ ಕುಳಿತು ಯಡಿಯೂರಪ್ಪನವರನ್ನು ಜಗ್ಗಿಸುವ ಶಕ್ತಿಯನ್ನು ಶಿರಾ ಜನತೆ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ನಮಗೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

    ಹುಲಿಕುಂಟೆ ಹೋಬಳಿಯ ಹಂದಿಕುಂಟೆ ಗ್ರಾಪಂ ವ್ಯಾಪ್ತಿಯ ಪ್ರಜಾರಮುದ್ದನಹಳ್ಳಿ, ಅಗ್ರಹಾರ, ಹಂದಿಕುಂಟೆ, ಗೋಣಿಹಳ್ಳಿ, ಬಡಮಾರನಹಳ್ಳಿ,ಕಲ್ಲಹಳ್ಳಿ, ಕರೇಕ್ಯಾತನಹಳ್ಳಿ ಗ್ರಾಮಗಳಲ್ಲಿ ಪಕ್ಷದ ಅಭ್ಯರ್ಥಿ ಪರ ರೋಡ್ ಶೋ ನಡೆಸಿ ಮಾತನಾಡಿದರು. ಎರಡೂವರೆ ಸಾವಿರ ಕೋಟಿ 5 ವರ್ಷದಲ್ಲಿ ಶಿರಾ ಕ್ಷೇತ್ರಕ್ಕೆ ಬಂದಿದೆ, ನನ್ನ ಕ್ಷೇತ್ರಕ್ಕೆ 1 ಕೋಟಿ ತರಲು ಆಗಲಿಲ್ಲ ಎಂದು ಚಟಾಕಿ ಹಾರಿದರು. ಶಿರಾ ಭಾಗದಲ್ಲಿ ಅಂತರ್ಜಲ ವೃದ್ಧಿಯಾಗಲು ಚೆಕ್ ಡ್ಯಾಮ್, ಸೇತುವೆ, ರಸ್ತೆಗಳು, ಹಾಸ್ಟೆಲ್‌ಗಳನ್ನು ನಿರ್ಮಿಸಿ ಅಭಿವೃದ್ಧಿ ಹರಿಕಾರ ಎಂಬುದಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್ ಅಭ್ಯರ್ಥಿ ಎಂದರು.

    ಯುವ ಕಾಂಗ್ರೆಸ್ ರ‌್ಯಾಲಿ: ಶಿರಾ ನಗರದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಬೃಹತ್ ಬೈಕ್ ರ‌್ಯಾಲಿ ನಡೆಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಪರ ಅಬ್ಬರದ ಪ್ರಚಾರ ನಡೆಸಿದರು. ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರ, ನಲಪಾಡ್, ಸಂತೋಷ್ ಜಯಚಂದ್ರ ನೇತೃತ್ವದಲ್ಲಿ ಸಾವಿರಾರು ಯುವಕರು ಬೈಕ್ ರ‌್ಯಾಲಿಯಲ್ಲಿ ಭಾಗವಹಿಸಿದ್ದರು.

    ಬಂಡೆಯನ್ನು ಪುಡಿ ಮಾಡಿ ಆ ಕಲ್ಲಿನಲ್ಲಿ ಈ ಸರ್ಕಾರಕ್ಕೆ ಹೊಡೆಯಬೇಕು. ನಿಮಗಾಗಿರುವ ಅನ್ಯಾಯಕ್ಕೆ ತಕ್ಕ ಪಾಠ ಕಲಿಸಿರಿ. ಬಿಜೆಪಿ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ನಂತರ, ಕರೊನಾ ಸಂದರ್ಭದಲ್ಲಿ ಎಸಗಿರುವ ಭ್ರಷ್ಟಾಚಾರಕ್ಕೆ ಬುದ್ಧಿ ಕಲಿಸಿ.
    ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಬಂಡೆಯನ್ನು ಪುಡಿ ಮಾಡಿ ಆ ಕಲ್ಲಿನಲ್ಲಿ ಈ ಸರ್ಕಾರಕ್ಕೆ ಹೊಡೆಯಬೇಕು. ನಿಮಗಾಗಿರುವ ಅನ್ಯಾಯಕ್ಕೆ ತಕ್ಕ ಪಾಠ ಕಲಿಸಿರಿ. ಬಿಜೆಪಿ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ನಂತರ, ಕರೊನಾ ಸಂದರ್ಭದಲ್ಲಿ ಎಸಗಿರುವ ಭ್ರಷ್ಟಾಚಾರಕ್ಕೆ ಬುದ್ಧಿ ಕಲಿಸಿ.
    ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts