ಪುಣೆ: ಅಡುಗೆ ಮನೆಯಲ್ಲಿ ಪ್ರೇಮಿಗಳ ನಡುವೆ ಶುರುವಾದ ವಾಗ್ವಾದವು ಒಬ್ಬರ ಕೊಲೆಯಲ್ಲಿ ಅಂತ್ಯವಾಗಿದೆ. ಈ ಘಟನೆ ಮಹಾರಾಷ್ಟ್ರದ ಪುಣೆಯ ವಾಘೋಲಿ ಪ್ರದೇಶದಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಯಶವಂತ್ ಮುಂಡೆ(22) ಎಂದು ಗುರುತಿಸಲಾಗಿದ್ದು ಗಾಯಗೊಂಡಿರುವ ಆರೋಪಿ ಆಕಾಂಕ್ಷ ಪನ್ಹಾಲೆ(21)ಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲಿಸರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಲೋಣಿಕಂಡ್ ಪೊಲೀಸ್ ಠಾಣಾಧಿಕಾರಿ ಗಜಾನನ ಪವಾರ್ ಮೃತ ಯಶವಂತ್ ಹಾಗೂ ಆರೋಪಿ ಆಕಾಂಕ್ಷ ಪರಸ್ಪರ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಪರೀಕ್ಷೆ ಇದ್ದ ಕಾರಣ ಪ್ರಿಯಕರಣ ರೂಮಿಗೆ ಪ್ರೇಯಸಿ ಓದಿಕೊಳ್ಳಲು ಬಂದಿದ್ದಾಳೆ.
ಇದನ್ನೂ ಓದಿ: ಚೆನ್ನೈ vs ಗುಜರಾತ್ ಫೈನಲ್ ಪಂದ್ಯ ಮುಂದೂಡಿಕೆ; ರಾತ್ರಿಯಿಡಿ ರಸ್ತೆಯಲ್ಲಿ ಕಾಲಕಳೆದ ಸಿಎಸ್ಕೆ ಫ್ಯಾನ್ಸ್
ಸೋಮವಾರ ಬೆಳಗಿನ ಜಾವ ಇಬ್ಬರ ನಡುವೆ ವಿಚಾರ ಒಂದಕ್ಕೆ ವಾಗ್ವಾದ ಶುರುವಾಗಿದ್ದು ಈ ವೇಳ ಆಕಾಂಕ್ಷ ಯಶವಂತ್ಗೆ ಚಾಕುವಿನಿಂದ ಇರಿದಿದ್ದಾಳೆ. ತೀವ್ರವಾಗಿ ಗಾಯಗೊಂಡಿದ್ದ ಪ್ರಿಯಕರನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಗಲಾಟೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಆಕಾಂಕ್ಷಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಗುಣಮುಖಳಾದ ನಂತರ ವಿಚಾರಣೆಗೆ ಒಳಪಡಿಸಲಾಗುವುದುಎ ಎಂದು ಲೋಣಿಕಂಡ್ ಪೊಲೀಸ್ ಠಾಣಾಧಿಕಾರಿ ಗಜಾನನ ಪವಾರ್ ತಿಳಿಸಿದ್ದಾರೆ.