More

    ನವನಗರದಲ್ಲಿ ಜೋಶಿ ಪರ ಮತಯಾಚನೆ

    ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯಥಿರ್ ಪ್ರಲ್ಹಾದ ಜೋಶಿ ಪರವಾಗಿ ಇಲ್ಲಿಯ ನವನಗರದಲ್ಲಿ ಮನೆಮನೆಗೆ ತೆರಳಿ ಕರಪತ್ರ ಹಂಚುವ ಮುಖಾಂತರ ಮತಯಾಚನೆ ಮಾಡಲಾಯಿತು.

    ಪಾಲಿಕೆ ಮಾಜಿ ಸದಸ್ಯ ಮಲ್ಲಿಕಾರ್ಜುನ ಹೊರಕೇರಿ ಮಾತನಾಡಿ, 10 ವರ್ಷಗಳಲ್ಲಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ಸಾಕಷ್ಟು ಅಭಿವೃದ್ಧಿ ಹೊಂದಿದೆ. ಧಾರವಾಡ ಕ್ಷೇತ್ರದಲ್ಲಿ ಅಭಿವೃದ್ಧಿಯು ಎಲ್ಲ ಕಡೆ ಗೋಚರಿಸುತ್ತದೆ. ಹಾಗಾಗಿ ಜೋಶಿ ಅವರು 5ನೇ ಬಾರಿಗೆ ದಾಖಲೆ ಅಂತರದಲ್ಲಿ ಆಯ್ಕೆಯಾಗುವುದು ನಿಶ್ಚಿತ ಎಂದು ಹೇಳಿದರು.

    ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುವುದು ದೇಶದ ಹಿತದೃಷ್ಟಿಯಿಂದ ಮುಖ್ಯವಾಗಿದೆ. ಅವರ ಕೈಬಲಪಡಿಸಲು ಈ ಭಾಗದಲ್ಲಿಯೂ ಬಿಜೆಪಿ ಗೆಲ್ಲಬೇಕಿದೆ. ಇದಕ್ಕೆ ಮತದಾರರೆಲ್ಲರೂ ಬೆಂಬಲ ನೀಡಬೇಕು ಎಂದರು.

    ಬಿಜೆಪಿ ಕೈಗಾರಿಕಾ ಪ್ರಕೋಷ್ಠದ ಸಹಸಂಚಾಲಕ ನರೇಂದ್ರ ಕುಲಕರ್ಣಿ ಮಾತನಾಡಿ, ಧಾರವಾಡ ಕ್ಷೇತ್ರ ಹಾಗೂ ದೇಶದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಜೋಶಿ ಅವರಿಗೆ ಮತ ನೀಡುವ ಮೂಲಕ ಬೆಂಬಲಿಸಬೇಕೆಂದು ವಿನಂತಿಸಿದರು.

    ಜಂಗಲೆಪ್ಪಗೌಡ, ಪ್ರಮೋದ ಉಳ್ಳಿಗೇರಿ, ಬಿ.ಪಿ. ಗಿರಿಗೌಡರ, ಸತೀಶ ಕಸಬೇದ, ಅನೂಪ ಬಾಲಿ, ವಿನಾಯಕ ಟಿಕಾರೆ, ಪ್ರಮೋದ ಪುರಾಣಿಕಮಠ, ಪ್ರಕಾಶ ಕುಂಬಾರ, ಮಂಜುನಾಥ ಹೆಬಸೂರ, ರೇಣುಕಾ ವಂಜರಿ, ಅಭಿಷೇಕ, ರಾಹುಲ, ಶಾಂತಾ ಮನಗುಂಡಿ, ವಿಶ್ವನಾಥ ಶೆಟ್ಟಿ, ಶ್ರೀಧರ ಸಿಂಗ್, ಮಂಜುನಾಥ ಪಾಟೀಲ, ಲಿಂಗರಾಜ ಕರಿಕಟ್ಟಿ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts