More

    ಯುವತಿ ಫೋಟೋ ಎಡಿಟ್​ ಮಾಡಿ ಜಾಲತಾಣದಲ್ಲಿ ಹರಿಬಿಟ್ಟ ಯುವಕ: ಮುಂದಾಗಿದ್ದು ಯಾರು ಊಹಿಸದ ದುರಂತ

    ಕಲಬುರಗಿ: ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಯುವತಿ ಫೋಟೋವನ್ನು ದುರ್ಬಳಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಬೇಸತ್ತ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಳಗಿ ತಾಲೂಕಿನ ಬುಗಡಿ ತಾಂಡಾದಲ್ಲಿ ಬುಧವಾರ ನಡೆದಿದೆ.

    ಇದನ್ನೂ ಓದಿ: ಆಸ್ತಿಗಾಗಿ ಕೋರ್ಟ್ ಮೆಟ್ಟಿಲೇರಿರುವ ಮಾಜಿ ಭೂಗತ ಪಾತಕಿ ಮುತ್ತಪ್ಪ ರೈ ಪತ್ನಿಯ ಬೇಡಿಕೆ ಏನು?

    ಬುಗಡಿ ತಾಂಡಾ ನಿವಾಸಿ ಸರಿತಾ(18) ನೇಣಿಗೆ ಶರಣಾದ ದುರ್ದೈವಿ. ಅದೇ ಗ್ರಾಮದ ಶ್ರೀನಿವಾಸ ಎಂಬಾಂತ ಈ ನೀಚ ಕೃತ್ಯ ಎಸಗಿದ್ದಾನೆ.

    ಆರೋಪಿ ಶ್ರೀನಿವಾಸ ಯುವತಿಯ ಜತೆ ತನ್ನ ಫೋಟೋ ರೀಮಿಕ್ಸ್ ಮಾಡಿ ಸಾಮಾಜಿಕ ತಾಣದಲ್ಲಿ ಹರಿಬಿಟ್ಟಿದ್ದ. ಅಲ್ಲದೆ, ದಿನನಿತ್ಯ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಆತನ ಕಾಟ ತಾಳಲಾರದೇ ಸರಿತಾ ನೇಣಿಗೆ ಶರಣಾಗಿದ್ದಾಳೆಂದು ತಿಳಿದುಬಂದಿದೆ.

    ಇದನ್ನೂ ಓದಿ: ಗೊಂದಲದ ಗೂಡಾದ ಆನ್​ಲೈನ್ ಶಿಕ್ಷಣ: ಹೈಕೋರ್ಟ್ ಆನ್​ಲೈನ್ ಶಿಕ್ಷಣ ಪರವಾಗಿ ತೀರ್ಪು

    ಪತ್ರ ಬರೆದಿಟ್ಟು ಸರಿತಾ ಆತ್ಮಹತ್ಯೆ ಮಾಡಿಕೊಂಡಿದ್ದು, ಇದರ ಬೆನ್ನಲ್ಲೇ ಆರೋಪಿ ಶ್ರೀನಿವಾಸ ಗ್ರಾಮದಿಂದ ಪರಾರಿಯಾಗಿದ್ದಾನೆ. ರಟಕಲ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಪೆನ್​ಡ್ರೈವ್ ರಹಸ್ಯ: ಮುರುಗೇಶ್ ನಿರಾಣಿ ಯೂಟರ್ನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts