ಪಾಟ್ನಾ: ನಿತೀಶ್ ಕುಮಾರ್ ಈಗ ತಮ್ಮ ಪಕ್ಷವನ್ನು ಬದಲಾಯಿಸಿದ್ದಾರೆ. ನಿತೀಶ್ ಕುಮಾರ್ ಮತ್ತೊಮ್ಮೆ ಎನ್ ಡಿಎ ಮೈತ್ರಿಕೂಟಕ್ಕೆ ಬಂದಿದ್ದಾರೆ. ಒಂದೆಡೆ ನಿತೀಶ್ ಕುಮಾರ್ ಅವರು ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದರೆ, ಮತ್ತೊಂದೆಡೆ ಪ್ರಮಾಣ ವಚನ ಸ್ವೀಕಾರಕ್ಕೆ ಸಿದ್ಧತೆಯೂ ತೀವ್ರಗೊಂಡಿದೆ. ನಿತೀಶ್ ಕುಮಾರ್ ಈಗ ಮತ್ತೊಮ್ಮೆ ಬಿಜೆಪಿ ಮತ್ತು ಇತರ ಮಿತ್ರಪಕ್ಷಗಳೊಂದಿಗೆ ಬಿಹಾರದ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದೇ ವೇಳೆ ನಿತೀಶ್ ಕುಮಾರ್ ಪಕ್ಷ ಬದಲಿಸುತ್ತಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಲಾಲು ಯಾದವ್ ಅವರ ಮಕ್ಕಳ ಪ್ರತಿಕ್ರಿಯೆಯೂ ಮುನ್ನೆಲೆಗೆ ಬರುತ್ತಿದೆ.
जब भाव न जागा भावों में,
उस भावों का कोई भाव नहीं,
ऐसी भावों का कोई स्थान नहीं,
जिनका भाव नहीं अपनों की भावों में,
कहाँ रखी है भाव तेरी, जिनका ख़्याल तेरी भावों में,
बस सत्ता का ख़्याल है तेरी भावों में,
अपनों के भावों का क्या हुआ।तेरा अंत होगा और अंत होगा तेरी भावों का, कोई…
— Tej Pratap Yadav (@TejYadav14) January 28, 2024
ಮೊದಲನೆಯದಾಗಿ, ಈ ಸಂಪೂರ್ಣ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ತೇಜಸ್ವಿ ಯಾದವ್, ಸಿಎಂ ನಿತೀಶ್ ಕುಮಾರ್ ಅವರು ಗೌರವಾನ್ವಿತರು. ಅನೇಕ ವಿಷಯಗಳು ಅವರ (ನಿತೀಶ್ ಕುಮಾರ್) ನಿಯಂತ್ರಣದಲ್ಲಿಲ್ಲ. ‘ಮಹಾಮೈತ್ರಿಕೂಟ’ದಲ್ಲಿರುವ ಆರ್ಜೆಡಿಯ ಮಿತ್ರಪಕ್ಷಗಳು ಮುಖ್ಯಮಂತ್ರಿಯನ್ನು ಸದಾ ಗೌರವಿಸುತ್ತವೆ ಎಂದು ಹೇಳಿದರು. ಮುಖ್ಯಮಂತ್ರಿಯಾಗಿ ವೇದಿಕೆ ಮೇಲೆ ನನ್ನ ಜೊತೆ ಕೂತು ‘2005ಕ್ಕಿಂತ ಮೊದಲು ಬಿಹಾರದಲ್ಲಿ ಏನಿತ್ತು’ ಎಂದು ಕೇಳುತ್ತಿದ್ದರು. ನಾನು ಎಂದಿಗೂ ಪ್ರತಿಕ್ರಿಯಿಸಲಿಲ್ಲ. ಈಗ, ಹೆಚ್ಚು ಜನರು ನಮ್ಮೊಂದಿಗಿದ್ದಾರೆ. ಎರಡು ದಶಕಗಳಲ್ಲಿ ಮಾಡದ ಕೆಲಸವನ್ನು ನಾವು ಅತಿ ಕಡಿಮೆ ಸಮಯದಲ್ಲಿ ಮಾಡಿದ್ದೇವೆ, ಉದ್ಯೋಗ, ಜಾತಿ ಗಣತಿ, ಮೀಸಲಾತಿ ಹೆಚ್ಚಳ ಇತ್ಯಾದಿ. ಬಿಹಾರದಲ್ಲಿ ಇನ್ನೂ ಆಟ ಆಡಬೇಕಿದೆ ಎಂದು ತೇಜಸ್ವಿ ಹೇಳಿದ್ದಾರೆ.
ಲಾಲು ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಕೂಡ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ. ಎಕ್ಸ್ ನಲ್ಲಿ ಕವನವೊಂದನ್ನು ಬರೆದಿರುವ ಅವರು ನಿತೀಶ್ ಕುಮಾರ್ ಅವರ ‘ಮೌಲ್ಯಗಳು’ ಮತ್ತು ಅವರ ‘ಚಿಂತನೆ’ಗಳ ಕುರಿತು ಮಾತನಾಡಿದ್ದಾರೆ.
कूड़ा गया फिर से कूड़ेदानी में
कूड़ा – मंडली को बदबूदार कूड़ा मुबारक pic.twitter.com/gQvablD7fC— Rohini Acharya (@RohiniAcharya2) January 28, 2024
ಇವರಲ್ಲದೆ ಲಾಲು ಪ್ರಸಾದ್ ಯಾದವ್ ಪುತ್ರಿ ರೋಹಿಣಿ ಆಚಾರ್ಯ ಕೂಡ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ರೋಹಿಣಿ ಆಚಾರ್ಯ ಅವರು ಕಸದ ಗಾಡಿಯ ಚಿತ್ರದೊಂದಿಗೆ ‘ಕಸ ಮತ್ತೆ ಕಸದ ತೊಟ್ಟಿಗೆ, ಗಬ್ಬು ನಾರುತ್ತಿರುವ ಕಸದ ಗುಂಪಿಗೆ ಅಭಿನಂದನೆಗಳು’ ಎಂದು ಬರೆದಿದ್ದಾರೆ.
ನಿತೀಶ್ ಕುಮಾರ್ ರಾಜೀನಾಮೆಯೊಂದಿಗೆ ಬಿಜೆಪಿಯೊಂದಿಗೆ ಹೊಸ ಸರ್ಕಾರವನ್ನು ರಚಿಸುವುದಾಗಿ ಘೋಷಿಸಿದ್ದಾರೆ. ಬಿಹಾರದ ಈ ಹೊಸ ಸರ್ಕಾರದಲ್ಲಿ ಒಬ್ಬ ಸಿಎಂ ಮತ್ತು ಇಬ್ಬರು ಉಪ ಮುಖ್ಯಮಂತ್ರಿಗಳ ಸೂತ್ರವನ್ನು ಅಳವಡಿಸಿಕೊಳ್ಳಲಾಗಿದೆ. ಇದರಲ್ಲಿ ನಿತೀಶ್ ಕುಮಾರ್ ಮತ್ತೆ ಸಿಎಂ ಆಗಲಿದ್ದು, ಇಬ್ಬರೂ ಉಪ ಮುಖ್ಯಮಂತ್ರಿಗಳು ಬಿಜೆಪಿಯವರೇ ಆಗಿದ್ದಾರೆ. ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಸಿನ್ಹಾ ಹೆಸರು ಕೇಳಿಬಂದಿದೆ.
ಇಂಡಿಯಾ ಒಕ್ಕೂಟಕ್ಕೆ ಶಾಕ್; ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ