More

    ಮತದಾನಕ್ಕೆ 3 ದಿನ ಇರುವಾಗಲೇ ನಗರಸಭೆ ಸದಸ್ಯನ ಕಿಡ್ನ್ಯಾಪ್​!

    ಕಾರವಾರ/ಹಳಿಯಾಳ: ಕೊಪ್ಪಳ ಜಿಲ್ಲೆಯ ಗಂಗಾವತಿ ನಗರಸಭೆ ಸದಸ್ಯನನ್ನು ಅಪಹರಣ ಮಾಡಿದ ಆರೋಪದ ಮೇರೆಗೆ ಶುಕ್ರವಾರ ಮೂವರನ್ನು ಬಂಧಿಸಲಾಗಿದೆ.

    ಗಂಗಾವತಿ ಕಾರ್ಪೋರೇಟರ್​ ಮನೋಹರಸ್ವಾಮಿ ಎಂಬುವವರನ್ನು ಅಪಹರಿಸಿ ಹಳಿಯಾಳಕ್ಕೆ ಕರೆತಂದಿದ್ದ ಗಂಗಾವತಿಯ ರಾಕೇಶ ಅಡಿವೆಪ್ಪ ನಾಯಕ (24), ಬಸವರಾಜ ಮಲ್ಲಪ್ಪ ಉಪ್ಪಾರ (22), ಶರಣಬಸು ಬಸವರಾಜ ವಂಕಲಕುಂಟೆ (24) ಬಂಧಿತರು. ಇನ್ನೊಬ್ಬ ಆರೋಪಿ ಲಿಂಗರಾಜ ಕ್ಯಾಂಪ್​ನ ರವಿ ಕುರುಬರ ತಲೆಮರೆಸಿಕೊಂಡಿದ್ದಾನೆ.

    ನ.2ರಂದು ಗಂಗಾವತಿ ನಗರಸಭೆಗೆ ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ತಮ್ಮ ಪರ ಅಭ್ಯರ್ಥಿಯನ್ನು ಬೆಂಬಲಿಸುವ ಸಲುವಾಗಿ ಅ.29ರಂದು ಕಾರ್ಪೋರೇಟರ್​ ಮನೋಹರಸ್ವಾಮಿಯನ್ನು ಗಂಗಾವತಿಯ ಬಾರ್​ವೊಂದರಿಂದ ನಾಲ್ವರು ಅಪಹರಿಸಿದ್ದರು. ಈ ವೇಳೆ ಮಬ್ಬು ಬರುವ ಸ್ಪ್ರೇ ಸಿಂಪಡಿಸಿದ್ದರು. ಇನ್ನೊವಾ ಕಾರಿನಲ್ಲಿ ಕಾರ್ಪೋರೇಟರ್​ನನ್ನು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳಕ್ಕೆ ಕರೆ ತಂದಿದ್ದರು.

    ಇಲ್ಲಿನ ಲಾಡ್ಜ್​ವೊಂದಕ್ಕೆ ಸ್ಥಳಾಂತರಿಸುವ ವೇಳೆ ಬೆಳಗಿನ ಜಾವ 4.20ರ ಸುಮಾರಿಗೆ ಕಾರ್ಪೋರೇಟರ್​ ಕೂಗಿಕೊಂಡಿದ್ದರು. ಅವರನ್ನು ಹಳಿಯಾಳ ಪೊಲೀಸರು ರಕ್ಷಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.

    ಅಪಹರಣ ಸಂಬಂಧ ಗಂಗಾವತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಲ್ಲರನ್ನೂ ಗಂಗಾವತಿ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಎಸ್​ಪಿ ಶಿವಪ್ರಕಾಶ ದೇವರಾಜು ಮಾಹಿತಿ ನೀಡಿದ್ದಾರೆ.

    ಈ ಪ್ರಕರಣ ಕುರಿತು ಸುದ್ದಿಗೋಷ್ಠಿ ನಡೆಸಿದ ಮಾಜಿ ಶಾಸಕ ಶಿವರಾಜ ತಂಗಡಗಿ, ಕಿಡ್ನಾಪ್ ಮಾಡುವ ಸಂಸ್ಕೃತಿಯನ್ನು ಕೊಪ್ಪಳ ಜಿಲ್ಲೆಗೆ ಬಿಜೆಪಿ ಪರಿಚಯಿಸಿದೆ ಎಂದು ಕಿಡಿಕಾರಿದ್ದಾರೆ.

    ಆಟವಾಡುತ್ತಲೇ ಲಿಫ್ಟ್​ ಗುಂಡಿಗೆ ಬಿದ್ದು ಪ್ರಾಣಬಿಟ್ಟ 2 ವರ್ಷದ ಮಗು!

    ‘ಕನಕಪುರ ಬಂಡೆಯಲ್ಲಿ ಕ್ರಿಶ್ಚಿಯನ್ ಮೂರ್ತಿ ಸ್ಥಾಪಿಸುವಾಗ ಒಕ್ಕಲಿಗರು ನೆನಪಾಗಲಿಲ್ಲವೇ?’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts