More

    ಸರ್ವರ ಒಳಿತಿಗೆ ಶ್ರಮಿಸಿದ ಜಗದ್ಗುರು:ಕಾಡಾ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಬಣ್ಣನೆ

    ಗಂಗಾವತಿ: ಮಾನವ ಧರ್ಮದ ಒಳಿತಿಗಾಗಿ ಶ್ರಮಿಸಿದ ಜಗದ್ಗುರು ಶ್ರೀ ರೇಣುಕಾಚಾರ್ಯರು ಸರ್ವ ಸಮುದಾಯದ ಉದ್ಧಾರಕರು ಎಂದು ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ ಹೇಳಿದರು.

    ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ನಿಮಿತ್ತ ನಗರದ ಶ್ರೀ ತ್ರಯಂಬಕೇಶ್ವರ ದೇವಾಲಯದ ಆವರಣದಲ್ಲಿ ಗುರುವಾರ ಶ್ರೀ ವೀರಮಹೇಶ್ವರ ಜಂಗಮ ಸಂಘ ಮತ್ತು ವೀರಶೈವ ಲಿಂಗಾಯತ ಸಮಾಜ ಏರ್ಪಡಿಸಿದ್ದ ಭಾವಚಿತ್ರ ಮೆರವಣಿಗೆ ಚಾಲನೆ ನೀಡಿ ಮಾತನಾಡಿದರು. ನಗರದ ಶ್ರೀ ಚನ್ನಮಲ್ಲಿಕಾರ್ಜುನ ದೇವಾಲಯದಿಂದ ಪ್ರಮುಖ ವೃತ್ತಗಳ ಮೂಲಕ ಸಾಗಿ ತ್ರಯಂಬಕೇಶ್ವರ ದೇವಾಲಯಕ್ಕೆ ಮೆರವಣಿಗೆ ತಲುಪಿತು. ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ನಯೋಪ್ರಾ ಅಧ್ಯಕ್ಷ ಎಸ್.ರಾಘವೇಂದ್ರ ಶ್ರೇಷ್ಠಿ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ನಗರಸಭೆ ಸದಸ್ಯ ಮನೋಹರಸ್ವಾಮಿ ಹಿರೇಮಠ, ಸಮಾಜದ ತಾಲೂಕಾಧ್ಯಕ್ಷ ಶಂಕ್ರಯ್ಯಸ್ವಾಮಿ, ಕಲ್ಲೇಶ ಹಿರೇಮಠ ಇತರರಿದ್ದರು. ನಂತರ ವೇದಿಕೆ ಕಾರ್ಯಕ್ರಮವನ್ನು ಶಾಸಕ ಪರಣ್ಣಮುನವಳ್ಳಿ ಉದ್ಘಾಟಿಸಿದರು. ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು, ಸಮಾಜದ ಗೌರವಾಧ್ಯಕ್ಷ ಹುಚ್ಚಯ್ಯಸ್ವಾಮಿ, ಪದಾಧಿಕಾರಿಗಳಾದ ಎಸ್.ಬಿ.ಹಿರೇಮಠ, ಆದಯ್ಯಸ್ವಾಮಿ ಹಿರೇಮಠ, ಶಿವಯ್ಯಸ್ವಾಮಿ ಹಿರೇಮಠ, ಅಮರಯ್ಯಸ್ವಾಮಿ ಜಾಲಿಹಾಳಮಠ, ಬಸವಲಿಂಗಯ್ಯಸ್ವಾಮಿ ಅನ್ವರಿ, ಮಂಜುನಾಥ ಸ್ವಾಮಿ ಹಿರೇಮಠ, ವೀರಯ್ಯಸ್ವಾಮಿ ಹಿರೇಮಠ, ಮುಖಂಡರಾದ ಸಾಗರ್ ಮುನವಳ್ಳಿ , ಕೆ.ಚನ್ನಬಸಯ್ಯಸ್ವಾಮಿ, ಎಚ್. ಸಂಗಮೇಶ ಸುಗ್ರೀವಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts