ಬೆಂಗಳೂರು: ‘ಗೋಲ್ಡನ್ ಸ್ಟಾರ್’ ಗಣೇಶ್ಗೆ ಮಾರ್ಷಲ್ ಆರ್ಟ್ಸ್ನಲ್ಲಿ ವಿಶೇಷ ಆಸಕ್ತಿ. ಮುವಾಯ್ ಥಾಯ್ ಎಂಬ ಕಲೆಗೆ ಅವರು ಭಾರತದಲ್ಲಿ ರಾಯಭಾರಿ ಆಗಿದ್ದು ನೆನಪಿರಬಹುದು. ಈಗ ಅವರ ಮಗ ವಿಹಾನ್ ಸಹ ಅದೇ ದಾರಿಯಲ್ಲಿ ಹೆಜ್ಜೆ ಇಟ್ಟಿದ್ದಾನೆ.
ಇದನ್ನೂ ಓದಿ: ‘ಡ್ಯಾಶ್’ ಹಾಡಿಗೆ ಕೋಟಿ ವೀಕ್ಷಣೆ … ಖುಷಿಯಾದರು ಚಂದನ್, ಸಂಜನಾ
ಇತ್ತೀಚೆಗೆ ಗಣರಾಜ್ಯೋತ್ಸವದ ಅಂಗವಾಗಿ ನಡೆದ ಜ್ಯೂನಿಯರ್ ಕರಾಟೆ ಚಾಂಪಿಯನ್ಶಿಪ್ನಲ್ಲಿ ವಿಹಾನ್ ವಿನ್ನರ್ ಆಗಿದ್ದಾನೆ. ಈ ವಿಷಯವನ್ನು ಸ್ವತಃ ಗಣೇಶ್ ಹೆಮ್ಮೆಯಿಂದ ಬಹಿರಂಗಪಡಿಸಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಖುಷಿ ಹಂಚಿಕೊಂಡಿರುವ ಗಣೇಶ್, ‘ಮೊದಲ ಜ್ಯೂನಿಯರ್ ಕರಾಟೆ ಚಾಂಪಿಯನ್ಶಿಪ್ ಗೆದ್ದ ಮಗನಿಗೆ ಅಭಿನಂದನೆಗಳು’ ಎಂದು ವಿಶ್ ಮಾಡಿದ್ದಾರೆ.
ಇದನ್ನೂ ಓದಿ: ಕನ್ನಡ ಚಿತ್ರರಂಗಕ್ಕೆ ಶ್ರುತಿ-ಶರಣ್ ಕುಟುಂಬದ ಇನ್ನೊಬ್ಬರ ಎಂಟ್ರಿ …
ಪ್ರೀತಂ ಗುಬ್ಬಿ ನಿರ್ದೇಶನದ ‘ಬಾನದಾರಿಯಲ್ಲಿ’ ಚಿತ್ರದಲ್ಲಿ ಗಣೇಶ್ ಅಭಿನಯಿಸಿದ್ದು, ಈ ಚಿತ್ರ ಮಾರ್ಚ್ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
2 ದಿನಗಳಲ್ಲಿ 127 ಕೋಟಿ ಗಳಿಕೆ; ಹಳೆಯ ದಾಖಲೆಗಳನ್ನೆಲ್ಲ ಮುರಿದ ‘ಪಠಾಣ್’