More

    ಡಿವೈಡರ್ ಮೇಲೆ ಹರಿದ ಕಲ್ಲಿದ್ದಲು ಲಾರಿ

    ತೀರ್ಥಹಳ್ಳಿ: ಚಾಲಕನ ನಿಯಂತ್ರಣ ತಪ್ಪಿದ ಕಲ್ಲಿದ್ದಲು ತುಂಬಿದ ಲಾರಿಯೊಂದು ಪಟ್ಟಣದ ಗಾಂಧಿ ಚೌಕದಲ್ಲಿ ಶುಕ್ರವಾರ ರಾತ್ರಿ ಹೆದ್ದಾರಿ ನಡುವಿನ ಡಿವೈಡರ್ ಮೇಲೆ ನುಗ್ಗಿದ ಪರಿಣಾಮ ಬೀದಿ ದೀಪದ ಕಂಬಗಳು ವಿದ್ಯುತ್ ಲೈನಿಗೆ ಹಾನಿ ಸಂಭವಿಸಿದ್ದು ಲಾರಿಗೂ ಸಾಕಷ್ಟು ಹಾನಿ ಉಂಟಾಗಿದೆ. ಶಿಕಾರಿಪುರದ ಈ ಲಾರಿ ಮಂಗಳೂರಿನಿಂದ ಕಲ್ಲಿದ್ದಲನ್ನು ತುಂಬಿಕೊಂಡು ಶಿವಮೊಗ್ಗ ಸಮೀಪದ ಮಾಚೇನಹಳ್ಳಿಗೆ ಹೊರಟಿದ್ದು ರಾತ್ರಿ 2 ಗಂಟೆ ಅಂದಾಜಿಗೆ ಅಪಘಾತ ಸಂಭವಿಸಿದೆ. ಈ ಘಟನೆಯಿಂದಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ನಂತರ ಈ ಲಾರಿಯಲ್ಲಿದ್ದ ಕಲ್ಲಿದ್ದಲನ್ನು ಜೆಸಿಬಿ ಮೂಲಕ ಬೇರೆ ಲಾರಿಗೆ ತುಂಬಿಸಿ ಹೆದ್ದಾರಿ ತೆರವುಗೊಳಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts