More

    ದ್ಯಾಬೇರಿಯಲ್ಲಿ ಸಸಿ ನೆಡುವ ಕಾರ್ಯಕ್ರಮ

    ವಿಜಯಪುರ: ಮಹಾತ್ಮ ಗಾಂಧಿ ಜಯಂತಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ತಾಲೂಕಿನ ದ್ಯಾಬೇರಿ ಗ್ರಾಮದ ಸ್ಮಶಾನದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
    ನಾಗಠಾಣ ಬಿಜೆಪಿ ಮಂಡಲ ಅಧ್ಯಕ್ಷ ಈಶ್ವರ ಶಿವೂರ ಮಾತನಾಡಿ, ಮಹಾತ್ಮ ಗಾಂಧಿ ಅವರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರ ಪರಿಣಾಮ ಗಾಂಧೀಜಿ ಕಂಡ ಸ್ವಚ್ಛ ಭಾರತದ ಪರಿಕಲ್ಪನೆಗೆ ಜೀವ ತುಂಬಿದ್ದಾರೆ ಎಂದರು.
    ಜಿಪಂ ಸದಸ್ಯ ನವೀನ್ ಅರಕೇರಿ ಮಾತನಾಡಿ, ಮಹಾನ್ ನಾಯಕರ ತತ್ವಾದರ್ಶಗಳನ್ನು ಯುವಜನತೆ ಪಾಲಿಸಬೇಕು ಎಂದು ತಿಳಿಸಿದರು.
    ಹಿಂದುಳಿದ ಮೋರ್ಚಾ ಪ್ರಧಾನ ಕಾರ್ಯದರ್ಶಿ ರವಿಕುಮಾರ ಬಿರಾದಾರ, ಪ್ರಕಾಶ ಲೋಣಿ, ಪ್ರವೀಣ ಶೆಂಡೆ, ಅನೀಲ ಬಿರಾದಾರ, ಸಿದ್ದು ದಸ್ತರಡ್ಡಿ, ಶರತ್ ರಜಪೂತ, ರವಿ ಮುಕರ್ತಿಹಾಳ, ಮಂಜುಳಾ ಪೂಜಾರಿ, ಚಿದಾನಂದ ಯಳಮೇಲಿ, ಸಂತೋಷ ವಾಲಿಕಾರ, ಬಸು ಶಿರಕನಳ್ಳಿ, ಪ್ರಭು ಕೆಂಗಾರ, ಮುರಳಿ ಡಗೆ, ನಾಮದೇವ ತರಸೆ, ರವಿ ನಾವಿ, ಶ್ರೀಪಾದ ಜೋಶಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts