More

    ಮಾರುಕಟ್ಟೆ ಪ್ರವೇಶಿಸಿದ ಗುಣಮಟ್ಟದ ಡುರಮ್​ ಗೋಧಿ ಉತ್ಪನ್ನ: ‘ಗಜರಾಜ ರಾಯಲ್​’ ಪರಿಚಯಿಸಿದ ನಟಿ ಕಾಜಲ್​

    ಉತ್ಕೃಷ್ಟ ಗುಣಮಟ್ಟದ ಡುರಮ್​ ಗೋಧಿ ಉತ್ಪನ್ನಗಳನ್ನು ತಯಾರಿಸುವಲ್ಲಿ ಮುಂಚೂಣಿಯಲ್ಲಿರುವ ಗಜರಾಜ ಅಗ್ರೋಟೆಕ್​ (ಈ ಹಿಂದೆ ಗೋಯಲ್​ ಇಂಡಸ್ಟ್ರೀಸ್​) ಕಂಪನಿಯು “ಗಜರಾಜ ರಾಯಲ್​” ಹೆಸರಿನ ತನ್ನ ಸೂಪರ್​ ಪ್ರೀಮಿಯಂ ಶ್ರೇಣಿಯ ನೂತನ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಈ ಬ್ರ್ಯಾಂಡ್​ನ ರಾಯಭಾರಿಯನ್ನಾಗಿ ಟಾಲಿವುಡ್​ ನಟಿ ಕಾಜಲ್​ ಅಗರವಾಲ್​ ಅವರನ್ನು ಆಯ್ಕೆ ಮಾಡಲಾಗಿದೆ.

    ಗಜರಾಜ ರಾಯಲ್​ ಶ್ರೇಣಿಯಲ್ಲಿ ಉತ್ತಮ ಗುಣಮಟ್ಟದ ಲ್ಯಾಪ್ಸಿ, ವಿಶೇಷ ಕೇಸರಿ ರವಾ, ದಲಿಯಾ, ಪಾಲಿಸ್​ ಮಾಡಿದ ಡುರುಮ್​ ಗೋಧಿ ಮತ್ತು ಡುರಮ್​ ಗೋಧಿ ಹಿಟ್ಟು ಒಳಗೊಂಡಿದ್ದು, 1 ಕೆಜಿ ಮತ್ತು ಅರ್ಧ ಕೆಜಿ ಪ್ಯಾಕೆಟಿನಲ್ಲಿ ಲಭ್ಯವಿದೆ. ಈ ಶ್ರೇಣಿಯ ಪ್ರತಿಯೊಂದು ಉತ್ಪನ್ನವು ಕೂಡ ಉತ್ತಮ ಆರೋಗ್ಯಕರ ಲಾಭವನ್ನು ಒಳಗೊಂಡಿದೆ. ದೇಹಕ್ಕೆ ಅಗತ್ಯವಾದ ಪ್ರೋಟಿನ್, ಫೈಬರ್ ಮತ್ತು ವಿಟಮಿನ್​ಗಳು ಹೇರಳವಾಗಿ ದೊರೆಯುತ್ತದೆ.

    ಉತ್ಕೃಷ್ಟ ಗುಣಮಟ್ಟದ ಉತ್ಪನ್ನವನ್ನು ತಯಾರಿಸಿರುವ ಗಜರಾಜ ಅಗ್ರೋಟೆಕ್​ ಕಂಪನಿ ತನ್ನ ಉತ್ಪನ್ನಗಳನ್ನು ಜನಸಾಮಾನ್ಯರಿಗೆ ಪರಿಚಯಿಸುವ ಸದುದ್ದೇಶದೊಂದಿಗೆ 360 ಡಿಗ್ರಿ ಬಹು ಮಾಧ್ಯಮ ಪ್ರಚಾರದ ಅಭಿಯಾನದೊಂದಿಗೆ ಮಾರುಕಟ್ಟೆಗೆ ಪ್ರವೇಶಿಸುತ್ತಿದೆ. “ಶುರುವಾತ್ ಅಚ್ಚೇ ಕಿ” ಎಂಬ ಘೋಷಣಾ ವಾಕ್ಯದೊಂದಿಗೆ ಬ್ರ್ಯಾಂಡ್ ಅಭಿಯಾನದ ಮೂಲಕ ರಾಯಭಾರಿಯಾಗಿರುವ ಖ್ಯಾತ ನಟಿ ಕಾಜಲ್ ಅಗರವಾಲ್​ ಅವರು ಈ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಕಂಪನಿಯ ನಿರ್ದೇಶಕ ಪ್ರಶಾಂತ್​ ಗೋಯಲ್​, ಈ ಹೊಸ ಪ್ರಯಾಣದಲ್ಲಿ ಕಾಜಲ್​ ಅಗರವಾಲ್​ ಅವರು ರಾಯಭಾರಿಯಾಗುವ ಮೂಲಕ ನಮ್ಮ ಜೊತೆಯಾಗಿರುವುದು ಖುಷಿಯ ವಿಚಾರವಾಗಿದೆ. ಗಜರಾಜ್ ಬ್ರಾಂಡ್ ಅಂಬಾಸಿಡರ್ ಆಗಿ ಅವರು ಮಾಡುವ ಪ್ರತಿಯೊಂದರಲ್ಲೂ ಸಹಾನುಭೂತಿ, ಒಳ್ಳೆಯತನವನ್ನು ಪ್ರತಿಬಿಂಬಿಸುವ ಮತ್ತು ಬಲವಾದ ಇಚ್ಛಾಶಕ್ತಿಯುಳ್ಳ ಎಲ್ಲ ಭಾರತೀಯ ಮಹಿಳೆಯರನ್ನು ಪ್ರತಿನಿಧಿಸುತ್ತಾರೆ. ಕಾಜಲ್​ ಅವರು ತಮ್ಮ ಬದ್ಧತೆ, ಪ್ರಾಮಾಣಿಕತೆ, ವಿಶ್ವಾಸಾರ್ಹತೆ ಮತ್ತು ನೈತಿಕತೆಯ ಮೂಲಕ ನಮ್ಮ ಬ್ರ್ಯಾಂಡ್ ಮೌಲ್ಯಗಳನ್ನು ಪ್ರತಿನಿಧಿಸುತ್ತಾರೆ. ಉತ್ಕೃಷ್ಟತೆಯನ್ನು ಅನುಸರಿಸಿ, ಒಳ್ಳೆಯ ಶಕ್ತಿಯ ಮೇಲೆ ನಂಬಿಕೆ ಇಟ್ಟು, ಗಜರಾಜ್ ಆಗ್ರೊಟೆಕ್‌ ರೀತಿ ಉತ್ತಮವಾದುದ್ದನ್ನು ನೀಡುತ್ತಾರೆ ಎಂಬ ನಂಬಿಕೆ ಇದೆ. ಅವರೊಂದಿಗೆ ಬಹುಕಾಲದ ಸಂಬಂಧವನ್ನು ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.

    ಮಾರುಕಟ್ಟೆ ಪ್ರವೇಶಿಸಿದ ಗುಣಮಟ್ಟದ ಡುರಮ್​ ಗೋಧಿ ಉತ್ಪನ್ನ: 'ಗಜರಾಜ ರಾಯಲ್​' ಪರಿಚಯಿಸಿದ ನಟಿ ಕಾಜಲ್​

    ಈ ಬ್ರ್ಯಾಂಡ್​ ಜತೆಗೆ ಅಗರವಾಲ್ ಅವರ ಸಂಬಂಧದಿಂದ ದಕ್ಷಿಣ ಭಾರತದ ಮಾರುಕಟ್ಟೆಗಳಲ್ಲಿ ಬ್ರ್ಯಾಂಡ್​ ಜನಪ್ರಿಯತೆಗೆ ನ್ಯಾಯ ಒದಗಿಸಲಿದೆ. ಲ್ಯಾಪ್ಸಿ, ಕೇಸರಿ ರವಾ ಮತ್ತು ಗೋಲ್ಡನ್ ಡಾಲಿಯಾ ಅಂತಾ ಬಂದಾಗ ಗಜರಾಜ್ ಶ್ರೇಣಿಯು ಉತ್ಪನ್ನಗಳು ದಕ್ಷಿಣದ ಮಾರುಕಟ್ಟೆಗಳಲ್ಲಿ ಅತ್ಯಂತ ವಿಶ್ವಾಸಾರ್ಹವಾಗಿದೆ. ಸ್ಥಿರವಾದ ಗುಣಮಟ್ಟಕ್ಕೆ ಹೆಸರುವಾಸಿಯಾಗಿರುವ ಗಜರಾಜ್ ಶ್ರೇಣಿಯು ತನ್ನ ಉತ್ತಮ ಮಾನದಂಡಗಳ ಕಾರಣದಿಂದಾಗಿಯೇ ಪ್ರತಿಯೊಬ್ಬರ ಅಡಿಗೆ ಮನೆಗಳಿಗೆ ಮತ್ತು ಅನೇಕರ ಹೃದಯಗಳಲ್ಲಿ ನೆಲೆಸಿದೆ.

    2002 ರಲ್ಲಿ ಕಂಪನಿ ಪ್ರಾರಂಭವಾದಾಗಿನಿಂದ ಗಜರಾಜ್ ಜಗತ್ತಿನಾದ್ಯಂತ ಗ್ರಾಹಕರಿಗೆ ಸ್ವಾಭಾವಿಕವಾಗಿ ಆರೋಗ್ಯಕರ ಆಹಾರದ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಿದೆ. ಕಂಪನಿಯು ಶೂನ್ಯ ದೋಷ ನೀತಿಗೆ ದೃಢವಾಗಿ ಬದ್ಧವಾಗಿದೆ. ಆರೋಗ್ಯಕರ ಆಹಾರವನ್ನು ಮುಂಚೂಣಿಗೆ ತರಲು ಕಂಪನಿಯ ಗೋಧಿಯ ನಿಜವಾದ ಸಾಮರ್ಥ್ಯವನ್ನು ಹೊರಹಾಕುವ ಡುರಮ್ ಗೋಧಿಯ ಬಗ್ಗೆ ಆಳವಾಗಿ ಅಧ್ಯಯನ ಮಾಡಿತು. ಭಾರತ ಮತ್ತು ಪ್ರಪಂಚದಲ್ಲಿ ಆರೋಗ್ಯ ಮತ್ತು ಜೀವನಶೈಲಿಯ ಬದಲಾಗುತ್ತಿರುವ ಸಂದರ್ಭದಲ್ಲಿ ಡುರಮ್​ ಗೋಧಿಯ ಬೆಳವಣಿಗೆಯು ಉತ್ತಮವಾಗಿದೆ ಎಂದು ಕಂಪನಿ ನಂಬುತ್ತದೆ. ಡುರಮ್ ಗೋಧಿಯನ್ನು ಭಾರತೀಯ ಪಾಕಪದ್ಧತಿಗೆ ಮರಳಿ ತರುವ ಮೂಲಕ, ಕಂಪನಿಯು ತನ್ನ ಪಾಲುದಾರರು ಮತ್ತು ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವ ಭರವಸೆಯನ್ನು ಪೂರೈಸಿದೆ.

    ಫಾರ್ಮ್‌ನಿಂದ ಫೋರ್ಕ್‌ವರೆಗೆ ಗಜರಾಜ್ ಆಗ್ರೊಟೆಕ್ “ಎಲ್ಲದರಲ್ಲೂ ಒಳ್ಳೆಯತನ” ಎಂಬ ತನ್ನ ಮೂಲ ತತ್ವಕ್ಕೆ ಬದ್ಧವಾಗಿದೆ ಮತ್ತು ಪ್ರಪಂಚದಾದ್ಯಂತದ ಗ್ರಾಹಕರಿಗೆ ಆಹಾರ, ಪೌಷ್ಟಿಕಾಂಶ, ಆನಂದದಾಯಕ ಮತ್ತು ಅನುಕರಣೀಯ ಪರಿಸರ ವ್ಯವಸ್ಥೆಯನ್ನು ರಚಿಸುವ ಮೂಲಕ ಡುರಮ್ ಗೋಧಿ ಆಧಾರಿತ ಉತ್ಪನ್ನದಲ್ಲಿ ಪ್ರಮುಖ ಬ್ರ್ಯಾಂಡ್​ ಆಗಲು ಬಯಸುತ್ತದೆ. ಈ ಮಿಷನ್‌ನ ಅಡಿಯಲ್ಲಿ ಯಾವಾಗಲೂ ಕಂಪನಿಯ ಮುಖ್ಯ ಆಲೋಚನೆ, “ಶುರುವಾತ್ ಅಚ್ಚೆ ಕಿ” ಬದ್ಧವಾಗಿರುವುದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts