More

    ರಿಕ್ಷಾ ಪಲ್ಟಿಯಾಗಿ ಗದಗ ನಿವಾಸಿ ಮೃತ್ಯು

    ಕಾಸರಗೋಡು: ಮೊಗ್ರಾಲ್ ಪುತ್ತೂರಿನಲ್ಲಿ ಆಟೋ ರಿಕ್ಷಾ ರಸ್ತೆ ಬದಿಯ ಹೊಂಡಕ್ಕೆ ಮಗುಚಿ, ರಿಕ್ಷಾ ಪ್ರಯಾಣಿಕ ಮೂಲತಃ ಗದಗ ಜಿಲ್ಲೆಯ ಸಿತಾರಹಳ್ಳಿ ನಿವಾಸಿ ಕೂಲಿ ಕಾರ್ಮಿಕ, ಶೇಖಪ್ಪ-ಎಲ್ಲಮ್ಮ ದಂಪತಿ ಪುತ್ರ ಹೊನ್ನಪ್ಪ ಪೂಜಾರ್(31) ಸೋಮವಾರ ಸಂಜೆ ಮೃತಪಟ್ಟಿದ್ದಾರೆ.

    ಘಟನೆಯಲ್ಲಿ ಚಾಲಕ ಬೆಳ್ಳೂರು ನಿವಾಸಿ ಸುಬೈರ್ ಸಹಿತ ರಿಕ್ಷಾದಲ್ಲಿದ್ದ ಇಬ್ಬರು ಕಾರ್ಮಿಕರೂ ಗಾಯಗೊಂಡಿದ್ದಾರೆ. ಹೊನ್ನಪ್ಪ ಕಾಸರಗೋಡು ನಗರದ ಮೀಪುಗುರಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

    ಮೊಗ್ರಾಲ್ ಪುತ್ತೂರು-ಕಂಬಾರು ರಸ್ತೆಯ ಎಡಿಚ್ಚಾಲ್ ಎಂಬಲ್ಲಿ ಸಂಜೆ ಹೊಂಡಕ್ಕೆ ಮಗುಚಿದ ರಿಕ್ಷಾವನ್ನು ಸ್ಥಳೀಯರು ಹರಸಾಹಸದಿಂದ ಮೇಲಕ್ಕೆತ್ತಿದ್ದರು. ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಹೊನ್ನಪ್ಪ ಸೋಮವಾರ ರಾತ್ರಿ ಮೃತಪಟ್ಟರು.

    ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಯ ಮಾಹಿತಿ ತಿಳಿದ ಸಂಬಂಧಿಕರು ಗದಗದಿಂದ ಕಾಸರಗೋಡಿಗೆ ಆಗಮಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಿಕರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts