ಶಿವಾನಂದ ಹಿರೇಮಠ, ಗದಗ
ದಕ್ಷ ಪೊಲೀಸ್ ವ್ಯವಸ್ಥೆಯತ್ತ ಜಿಲ್ಲೆ ಬದಲಾಗುತ್ತಿದೆ. ಸಿಸಿ ಅಳವಡಿಕೆ, ಪೊಲೀಸ್ ಠಾಣೆಗಳ ಮೇಲೆ ನಿಗಾ, ಅನಗತ್ಯ ಕಾಯುವಿಕೆಯಿಂದ ದೂರುದಾರರನ್ನು ಮುಕ್ತರನ್ನಾಗಿಸುವುದು ಮತ್ತು ನೋಂದವರಿಗೆ ತುರ್ತು ಸೇವೆ ಸಲ್ಲಿಸಲು ಜಿಲ್ಲೆಯ ಪೊಲೀಸ್ ಠಾಣೆಗಳ ಮೇಲ್ವಿಚಾರಣೆಗೆ ಪ್ರತ್ಯೇಕ ಡೆಸ್ಕ್ ತೆರೆಯಲಾಗಿದ್ದು, ನೋಂದ ಕುಟುಂಬಸ್ಥರು ಕೇವಲ 30 ನಿಮಿಷದಲ್ಲಿ ದೂರು ಸಲ್ಲಿಸಿ ಠಾಣೆಯಿಂದ ಹೊರಬರಬಹುದು. ಠಾಣೆಗಳಲ್ಲಿ ದೂರು ದಾರರನ್ನು ಅನಗತ್ಯ ಕಾಯಿಸಿದರೇ ಸಂಬಂಧಿಸಿದ ಪೊಲೀಸ್ ಅಧಿಕಾರಿಗೆ ಅಮಾನತು ಕಟ್ಟಿಟ್ಟ ಬುತ್ತಿ.
ಹೌದು, ಇಂತದ್ದೊಂದು ವ್ಯವಸ್ಥೆ ಸದ್ದಿಲ್ಲದೇ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಜಾರಿಯಾಗಿದೆ. ಪೊಲೀಸ್ ಸಿಬ್ಬಂದಿ ಮತ್ತು ಠಾಣೆಗಳ ಮೇಲೆ ಸಾಮಾನ್ಯ ನಾಗರಿಕರಲ್ಲಿ ಇರುವ ಅಸಮಧಾನ, ಆರೋಪಗಳನ್ನು ದೂರವಾಗಿಸಿ ಪೊಲಿಸ್ ವ್ಯವಸ್ಥೆ ಮೇಲೆ ನಂಬಿಕೆ ಬರಲು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಅವರು ಜಿಲ್ಲೆಯ ಎಲ್ಲ ಠಾಣೆಗಳಲ್ಲಿ ಈ ವ್ಯವಸ್ಥೆ ಕಡ್ಡಾಯ ಜಾರಿ ಮಾಡಿದ್ದಾರೆ. ನೋಂದ ವ್ಯಕ್ತಿ ಅಥವಾ ಕುಟುಂಬ ದೂರು ಸಲ್ಲಿಸಲು ಠಾಣೆಗೆ ತೆರಳಿದ ಸಂದರ್ಭದಲ್ಲಿ ಕೇವಲ ಮೂವತ್ತು ನಿಮಿಷದಲ್ಲಿ ಅವರ ಅಜಿರ್ ಸ್ವೀಕರಿಸಿ ಎೈಆರ್ ದಾಖಲಿಸಬೇಕು. ಈ ವ್ಯವಸ್ಥೆ ಕಡ್ಡಾಯ ಪಾಲನೆ ಆಗುತ್ತಿರುವುದನ್ನು ಗಮನಿಸಲು ವಿಶೇಷ ಸಿಬ್ಬಂದಿ ನೇಮಿಸಲಾಗಿದೆ. ದೂರುದಾರಂತೆ ನಟಿಸಿ ಪೊಲೀಸ್ ಠಾಣೆಗೆ ತೆರಳುವ ಈ ಸಿಬ್ಬಂದಿಯು ಅಲ್ಲಿನ ವ್ಯವಸ್ಥೆಯನ್ನು ನೇರವಾಗಿ ಜಿಲ್ಲಾ ಪೊಲೀಸ್ ಕಚೇರಿಗೆ ವರದಿ ಮಾಡುತ್ತದೆ. ಜಿಲ್ಲಾ ಪೊಲೀಸ್ ಕಚೇರಿಯಲ್ಲೂ ಪ್ರತ್ಯೇಕ ಡೆಸ್ಕ್ ತೆರೆಯಲಾಗಿದ್ದು, ದೂರುದಾರಂತೆ ಸಿಬ್ಬಂದಿಯೇ ಪೊಲೀಸ್ ಠಾಣೆಗೆ ಕರೆ ಮಾಡಿ ದೂರುದಾರರ ಜತೆ ಪೊಲೀಸ್ ಸಿಬ್ಬಂದಿ ವರ್ತನೆಯನ್ನು ಗಮನಿಸಲಾಗುತ್ತಿದೆ. ಈ ರೀತಿಯ ವ್ಯವಸ್ಥೆಯಿಂದ ಜಿಲ್ಲಾ ಕಚೇರಿಗೆ ಬರುವ ನೋಂದ ದೂರು ದಾರರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆ.
ಸೈಬರ್ ವ್ಯವಸ್ಥೆ: ಇತ್ತೀಚೆಗೆ ಸೈಬರ್ ಕೆಂ ಅಧಿಕಗೊಳ್ಳುತ್ತಿದ್ದು, ದೂರು ಸಲ್ಲಿಕೆಗೆ ಜಿಲ್ಲಾ ಪೊಲೀಸ್ ಕಚೇರಿಯನ್ನೇ ಸಂಪಕಿರ್ಸಬೇಕಿತ್ತು. ಇದರಿಂದ ದೂರು ಸಲ್ಲಿಕೆ ಆಗದೇ ಸೈಬರ್ ಜಾಲಕ್ಕೆ ಒಳಗಾಗಿ ಹಣ ಕಳೆದುಕೊಂಡ ನೋಂದವರು ಪೊಲೀಸ್ ಕಚೇರಿಯತ್ತ ಧಾವಿಸದೇ ಹಿಂದೆಟು ಹಾಕುತ್ತಿದ್ದರು. ಈಗ ಈ ಪ್ರಕ್ರಿಯೇ ಸರಳಗೊಂಡಿದ್ದು, ಸಮೀಪದ ಠಾಣೆಗೆ ತೆರಳಿ ಸೈಬರ್ ವಂಚನೆ ಕುರಿತಾದ ದೂರು ಸಲ್ಲಿಸಬಹುದಾಗಿದೆ. ಇದರಿಂದ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದು ಕಳೆದೆರೆಡೂ ತಿಂಗಳಲ್ಲಿ 30 ಪ್ರಕರಣ ದಾಖಲಾಗಿವೆ ಮತ್ತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸಂಚಾರ ವ್ಯವಸ್ಥೆಗೆ ಥರ್ಡ್ ಐ:
ಗದಗನಲ್ಲಿ ಕಾನೂನು ವ್ಯವಸ್ಥೆ ಸುವ್ಯವಸ್ಥಿತವಾಗಿ ಜಾರಿಗೊಳಿಸುವ ಉದ್ದೇಶದಿಂದ ಥರ್ಡ ಐ ಯೋಜನೆ ಜಾರಿಗೊಂಡಿದೆ. ಸೆಗ್ವೇ ಇಲೆಕ್ಟ್ರಿಕ್ ಬೈಕ್ಗಳನ್ನು ಪೊಲೀಸ್ ಇಲಾಖೆ ಬಳಸುತ್ತಿದ್ದು, ಕೆಂ ನಿಯಂತ್ರಣಕ್ಕೆ ಸಂಚಾರಿ ನಿಯಮಗಳ ಕಟ್ಟುನಿಟ್ಟಿನ ಪಾಲನೆಗಾಗಿ ಈ ಬೈಕ್ಗಳು ಸಹಕಾರಿಯಾಗಿ ಆಗಲಿವೆ. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಕಮಾಂಡ್ ಸೆಂಟರ್, ಟ್ರಾಫಿಕ್ ಮ್ಯಾನೇಜ್ಮೆಂಟ್ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಸುಗಮ ಸಂಚಾರ ವ್ಯವಸ್ಥೆಗೆ ನಗರದ ಪ್ರಮುಖ 44 ಸ್ಥಳಗಳಲ್ಲಿ ಬುಲೆಟ್ ಕ್ಯಾಮರಾ ಅಳವಡಿಸಲಾಗಿದೆ. 44 ಕಿಮೀ ಆಪ್ಟಿಕಲ್ ೈಬರ್ ಅಳವಡಿಸಿದ್ದು 15 ಎಎಂಪಿಆರ್ ಸಿಸಿ ಟಿವಿ ಜೋಡಿಸಲಾಗಿದೆ. ಕೆಮೆರಾಗಳು 360 ಡಿಗ್ರಿ ಕಾರ್ಯ ನಿರ್ವಹಿಸುತ್ತವೆ. ನಗರದ ಒಟ್ಟಾರೆ 45 ಸ್ಥಳಗಳನ್ನು ಪೊಲೀಸ್ ಸಿಬ್ಬಂದಿ ಜಿಲ್ಲಾ ಕಚೇರಿಯಿಂದಲೇ ನಿಗಾ ವಹಿಸಬಹುದು. ಒಟ್ಟಾರೆ 3 ಕೊಟಿ ವೆಚ್ಚದ ಯೋಜನೆ ಇದಾಗಿದೆ.
ಪ್ರಯಾಣಿಕರಿಗೆ ನೆರಳು:
ಕಳೆದ ಬೇಸಿಗೆಯಲ್ಲಿ ಉಷ್ಣಾಂಶ ಅಧಿಕವಿದ್ದ ಹಿನ್ನೆಲೆ ಟ್ರಾಫಿಕ್ ಸಿಗ್ನಲ್ಗಳಲ್ಲಿ ಬೈಕ್ ಸವಾರರಿಗೆ ಅಧಿಕ ಉಷ್ಣಾಂಶದಿಂದ ಇರಿಸು ಮುರಿಸು ಉಂಟಾಗುತ್ತಿತ್ತು. ಹಾಗಾಗಿ ನಗರಸಭೆ ಸಹಭಾಗಿತ್ವದಲ್ಲಿ ನಗರದ ವಿವಿಧ ಟ್ರಾಫಿಕ್ ಸಿಗ್ನಲ್ ಸ್ಥಳಗಳಲ್ಲಿ ಹಸಿರು ಮೇಲ್ಚಾವಣಿ ನಿಮಿರ್ಸುವ ಮೂಲಕ ನೆರಳನ್ನು ಒದಗಿಸಲಾಗಿತ್ತು. ಇದರಿಂದ ನಾಗರಿಕ ವಲಯದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.
ಇಲಾಖೆ ಆವರಣ ಉನ್ನತಿಕರಣ:
ಜಿಲ್ಲಾ ಪೊಲೀಸ್ ಕಚೇರಿ ಉದ್ಘಾಟನೆಗೊಂಡು ದಶಕವೇ ಕಳೆದರೂ ಕಚೇರಿ ಆವರಣದಲ್ಲಿ ಸೂಕ್ತ ಪಾಕಿರ್ ವ್ಯವಸ್ಥೆ ಮತ್ತು ಜಿಲ್ಲಾ ಕಚೇರಿ ಸಂಪಕಿರ್ಸಲು ಉನ್ನತಿಕರಿಸಿದ ರಸ್ತೆ ಕೊರತೆ ಕಾಡುತ್ತಿತ್ತು. ಬಿ.ಎಸ್. ನೇಮಗೌಡ ಅವರು ಎಸ್ಪಿ ಯಾಗಿ ಅಧಿಕಾರ ವಹಿಸಿಕೊಂತರ ಆವರಣದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ. ಹೊಸ ಬಸ್ ನಿಲ್ದಾಣದಿಂದ ಜಿಲ್ಲಾ ಕಚೇರಿ ವರೆಗೂ ಉತ್ತಮ ರಸ್ತೆ ನಿರ್ಮಾಣಗೊಂಡಿದೆ.
ಕೋಟ್:
ಜನರಿಗೆ ಪೊಲೀಸ್ ಇಲಾಖೆ ಮೇಲೆ ವಿಶ್ವಾಸ ದ್ವಿಗುಣಗೊಳ್ಳಬೇಕು ಮತ್ತು ಪೊಲೀಸ್ ಇಲಾಖೆ ನಾಗರಿಕರ ಜತೆ ಪಾರದರ್ಶಕವಾಗಿ ವ್ಯವಹರಿಸುವ ನಿಟ್ಟಿನಲ್ಲಿ ಪ್ರತಿ ವಾರ್ಡ್ನಲ್ಲೂ ಕುಂದು ಕೊರತೆಗಳ ಬಗ್ಗೆ ಪೊಲೀಸ್ ಇಲಾಖೆಯಿಂದ ಸಭೆ ನಡೆಸಲು ಚಿಂತಿಸಲಾಗಿದೆ. ಪೊಲಿಸ್ ಇಲಾಖೆಯಲ್ಲಿ ಆಡಳಿತ ವ್ಯವಸ್ಥೆ ಬಲಪಡಿಸಲು ಹೊಸ ವಿಚಾರಗಳಿದ್ದು, ಒಮದೊಂದಾಗಿ ಕಾರ್ಯಗತಗೊಳಿಸಲಾಗುವುದು.
– ಬಿ.ಎಸ್. ನೇಮಗೌಡ, ಎಸ್ಪಿ, ಗದಗ