ಗದಗ
ವಿಶೇಷ ಚೇತನ ಮಕ್ಕಳಲ್ಲಿಯ ಸೂಪ್ತ ಪ್ರತಿಭೆಗೆ ಅವಕಾಶಗಳನ್ನು ನೀಡಿ ಅವರನ್ನು ಮುಖ್ಯವಾಹಿನಿಗೆ ತರುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಆರ್.ಎಸ್.ಬುರಡಿ ಹೇಳಿದರು.
ಮಂಗಳವಾರ ಗದಗ ಎಸ್.ಆರ್.ಪಿ ಕೇಂದ್ರದಲ್ಲಿ ೋರ್ಥ್ವೇ ೌಂಡೇಶನ್ದ ಕಾರ್ಯಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಅಂಗವಿಕಲರಾದಲ್ಲಿ ಪಾಲಕರು ನೋಂದುಕೊಳ್ಳದೆ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಿ ಅವರ ಸ್ವಾವಲಂಭನ ಬದುಕಿಗೆ ಪ್ರೇರೆಪಿಸಬೇಕು ಎಂದರು.
ೋರ್ಥ್ವೇ ಪೌಂಡೇಶನ್ ಮುಖ್ಯಸ್ಥ ಬಸವರಾಜ ಮ್ಯಾಗೇರಿ ಮಾತನಾಡಿ, ಅಂಗವಿಕಲತೆ ಎಂಬುದು ಶಾಪವಲ್ಲ. ಅವರಲ್ಲಿ ಪ್ರೀತಿ ತುಂಬಿ “ಎಲ್ಲರಂತೆ ನಾನು, ನನಗೂ ಶಾಲೆ’ ಎಂಬ ಭಾವನೆ ಬರುವಂತೆ ಮಾಡಬೇಕು ಎಂದರು.
ಎಸ್.ಆರ್.ಪಿ ಕೇಂದ್ರ ಮುಖ್ಯೋಪಾಧ್ಯಾಯ ವಿ.ಡಿ. ಹುಗ್ಗೇಣ್ಣವರ ಮಾತನಾಡಿ, ವಿಶೇಷ ಚೇತನ ಮಕ್ಕಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಎಂದರು.
ವಿ. ಸಿ. ಗಂಧ, ಡಾ. ಶಿವನಗೌಡ್ರ, ಕೆ.ಎಸ್.ಬೇಲೇರಿ, ಶಶಿಧರ ಚಳಗೇರಿ, ಸುನೀತಾ ತಿಮ್ಮನಗೌಡ್ರ ಹಲವರು ಉಪಸ್ಥಿತಿ ಇದ್ದರು.