ಗದಗ: ವಾರದಿಂದ ಬಾವಿಯಲ್ಲಿ ಬಿದ್ದು ಮೇಲೆ ಬರಲು ಪರಾದಡುತ್ತಿದ್ದ ನಾಗರ ಹಾವನ್ನು ಉರಗ ತಜ್ಞ ರಕ್ಷಣೆ ಮಾಡಿದ್ದಾರೆ.
ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದ ಹನುಮಂತಗೌಡ ಎಂಬುವವರ ತೋಟದ ಬಾವಿಯಲ್ಲಿ ಇದ್ದ ಹಾವನ್ನು ಉರಗ ತಜ್ಞ ಮಂಜುನಾಥ ನಾಯಕ ಎಂಬುವವರು ರಕ್ಷಣೆ ಮಾಡಿದ್ದಾರೆ.
ಬಾವಿಯಲ್ಲಿ ಬಿದ್ದ ಹಾವನ್ನು ರಕ್ಷಣೆ ಮಾಡುವಂತೆ ತೋಟದ ಮಾಲೀಕ ಹನುಮಂತಗೌಡ ಹಾಗೂ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಗ್ರಾಮಸ್ಥರ ಮನವಿಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು. ಹೀಗಾಗಿ ಗ್ರಾಮಸ್ಥರು ಹಾವು ರಕ್ಷಿಸಲು ಉರಗ ತಜ್ಞರ ಮೊರೆಹೋದರು. ಕೂಡಲೇ ಉರಗ ತಜ್ಞ ಮಂಜುನಾಥ ನಾಯಕ ಆಗಮಿಸಿ ಗ್ರಾಮಸ್ಥರ ಸಹಾಯದಿಂದ ಹಾವನ್ನು ರಕ್ಷಣೆ ಮಾಡಿದರು.