ಗದಗ: ಮದುವೆಯಾದ ಒಂದೂವರೆ ತಿಂಗಳಲ್ಲಿ ನವವಿವಾಹಿತೆ ದುರಂತ ಸಾವಿಗೀಡಾಗಿದ್ದು, ಹಲ್ಲೆ ಮಾಡಿ, ವಿಷ ಹಾಕಿ ಕೊಲೆ ಮಾಡಿರುವ ಆರೋಪ ಆಕೆಯ ಗಂಡನ ವಿರುದ್ಧ ಕೇಳಿಬಂದಿದೆ.
ಶಹನಾಜ್ ಬೇಗಂ (24) ಮೃತ ಮಹಿಳೆ. ವರದಕ್ಷಿಣೆ ಕಿರುಕುಳ ನೀಡಿ, ಕೊಲೆ ಮಾಡಿದ ಆರೋಪ ಶಹನಾಜ್ ಪತಿ ಶಹಬಾಜ್ ಮುಳಗುಂದ ಹಾಗೂ ಆತನ ಕುಟುಂಬಸ್ಥರ ಮೇಲಿದೆ.
ಇದನ್ನೂ ಓದಿ: ಮೊಬೈಲ್ ಕಳ್ಳನನ್ನು ಹಿಡಿಯಲು ಚಲಿಸುವ ರೈಲಿನಿಂದ ಜಿಗಿದ ಮಹಿಳೆ; ಮುಂದೆನಾಯ್ತು ನೋಡಿ…
ಮೃತ ಶಹನಾಜ್ ಗದಗ ಜಿಲ್ಲೆಯ ಗಜೇಂದ್ರಗಢ ಪಟ್ಟಣದ ನಿವಾಸಿ. ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣ ಶಹಬಾಜ್ ಜತೆ ಕಳೆದ ಒಂದೂವರೆ ತಿಂಗಳ ಹಿಂದೆ ಮದುವೆ ನಡೆದಿತ್ತು. ರಂಜಾನ್ ಹಬ್ಬಕ್ಕೆ ಕರೆದುಕೊಂಡು ಬರಲು ಹೆತ್ತವರು ಪ್ಲಾನ್ ಮಾಡಿದ್ದರು.
ಮಗಳು ಹಬ್ಬಕ್ಕೆ ಬರುತ್ತಾಳೆ ಅಂತ ಖುಷಿಯಲ್ಲಿದ್ದ ಹೆತ್ತವರು ಆಕೆಗೆ ಹೊಸ ಬಟ್ಟೆ, ಚಿನ್ನವನ್ನು ತೆಗೆದುಕೊಂಡು ಬಂದು ಮನೆಯಲ್ಲಿ ಮನೆಯಲ್ಲಿಟ್ಟದ್ದರು. ಇನ್ನೇನು ಮಗಳನ್ನು ಹಬ್ಬಕ್ಕೆ ಕರೆಯಲು ಹೋಗಬೇಕಿತ್ತು. ಅಷ್ಟರಲ್ಲಿ ಮಗಳ ಸಾವಿನ ಸುದ್ದಿ ಹೆತ್ತವರಿಗೆ ಬರ ಸಿಡಿಲಿನಂತೆ ಬಂದೆರಗಿದೆ.
ಗದಗಿನ ಜಿಮ್ಸ್ ಆಸ್ಪತ್ರೆಯಲ್ಲಿ ಮಗಳ ಶವವನ್ನು ನೋಡಿ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಗೃಹಿಣಿ ಶವವನ್ನು ಆಸ್ಪತ್ರೆಯಲ್ಲಿ ಬಿಟ್ಟು ಗಂಡನ ಮನೆಯವರು ಪರಾರಿಯಾಗಿದ್ದಾರೆ. (ದಿಗ್ವಿಜಯ ನ್ಯೂಸ್)
ಇದನ್ನೂ ಓದಿ: ಪಿಯುಸಿ ಮುಗೀತು ಮುಂದೇನು? ಇಲ್ಲಿದೆ ನೂರಾರು ಅವಕಾಶ, ಆಯ್ಕೆ ನಿಮ್ಮದು
ಹೇ ಟ್ವಿಟರ್! ಚಂದಾದಾರಿಕೆ ಪಾವತಿಸಿದ್ದೇನೆ..ಬ್ಲೂ ಟಿಕ್ ಹಿಂತಿರುಗಿಸಿ: ಅಮಿತಾಭ್ ಬಚ್ಚನ್ ಮನವಿ
‘ಮಳೆಯಲ್ಲಿ ಸಾಂಗ್ ಶೂಟಿಂಗ್ ವೇಳೆ ಒಳ ಉಡುಪು ಧರಿಸಿರಲಿಲ್ಲ: ಮೇಲಕ್ಕೆತ್ತಿದಾಗ ರಜನಿ ಸರ್ ಗಲಿಬಿಲಿಗೊಂಡಿದ್ದರು’
ತಾಯಿಯಾಗುತ್ತಿರುವ ಖುಷಿ ಹಂಚಿಕೊಂಡ ಇಲಿಯಾನಾ! ಗೋವಾ ಬ್ಯೂಟಿಗೆ ಹರಿದುಬಂತು ಪ್ರಶ್ನೆಗಳ ಸುರಿಮಳೆ