ಮುಗಳಖೋಡ: ಪಟ್ಟಣದ ಶ್ರೀ ರೇಣುಕಾದೇವಿ ಜಾತ್ರಾ ಮಹೋತ್ಸವಕ್ಕೆ ನ. 26ರಂದು ಶ್ರೀ ಯಲ್ಲಾಲಿಂಗೇಶ್ವರ ಬೃಹನ್ಮಮಠದ ಪೀಠಾಧಿಪತಿ ಡಾ.ಮುರುಘರಾಜೇಂದ್ರ ಶ್ರೀಗಳು ಚಾಲನೆ ನೀಡುವರು.
ರಾತ್ರಿ 9 ಗಂಟೆಯಿಂದ ಡೊಳ್ಳಿನ ಹಾಗೂ ಚೌಡಕಿ ಮೇಳಗಳಿಂದ ಆಧ್ಯಾತ್ಮಿಕ ಗಾಯನ, ನ. 27ರಂದು ಬೆಳಗ್ಗೆ 6 ಗಂಟೆಗೆ ದೇವಿ ಮೂರ್ತಿಗೆ ಮಹಾ ಅಭಿಷೇಕ, ನೈವೇದ್ಯ, 9 ಗಂಟೆಯಿಂದ ಪಟ್ಟಣದಲ್ಲಿ ದೇವಿ ಮೆರವಣಿಗೆ, ಮಧ್ಯಾಹ್ನ 12 ಗಂಟೆಗೆ ಪಡ್ಡಲಗಿ ತುಂಬುವುದು, ನಂತರ ಮಹಾಪ್ರಸಾದ ರಾತ್ರಿ 10 ಗಂಟೆಗೆ ಶ್ರೀ ರೇಣುಕಾದೇವಿ ಮಹಾತ್ಮೆ ಭಕ್ತಿ ಪ್ರಧಾನ ನಾಟಕ ಪ್ರದರ್ಶನಗೊಳ್ಳುವುದು ಎಂದು ಜಾತ್ರಾ ಮಹೋತ್ಸವ ಸಮಿತಿ ತಿಳಿಸಿದೆ.