More

    ಕಡಾಡಿಯವರಿಂದ ಕಲ್ಲೋಳಿಗೆ ಗೌರವ

    ಮೂಡಲಗಿ: ರಾಜ್ಯಸಭೆಗೆ ನೂತನ ಆಯ್ಕೆಯಾಗಿರುವ ತಾಲೂಕಿನ ಕಲ್ಲೋಳಿ ಪಟ್ಟಣದ ಈರಣ್ಣ ಕಡಾಡಿ ಅವರಿಗೆ ಪಟ್ಟಣದ ಬಸವೇಶ್ವರ ಅರ್ಬನ್ ಕ್ರೆಡಿಟ್ ಸೌಹಾರ್ದ ಸೊಸೈಟಿಯಲ್ಲಿ ಶನಿವಾರ ಸನ್ಮಾನಿಸಿ ಗೌರವಿಸಲಾಯಿತು.

    ಅಧ್ಯಕ್ಷತೆ ವಹಿಸಿದ್ದ ಸೊಸೈಟಿ ಅಧ್ಯಕ್ಷ ಬಿ.ಬಿ. ಬೆಳಕೂಡ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಜನಪರ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಈರಣ್ಣ ಕಡಾಡಿ ಅವರು ಕಲ್ಲೋಳಿ ಪಟ್ಟಣಕ್ಕೆ ಬಹದೊಡ್ಡ ಗೌರವ ತಂದಿದ್ದಾರೆ ಎಂದರು. ರಾಜ್ಯಸಭಾ ಸದಸ್ಯತ್ವದೊಂದಿಗೆ ಬಿಜೆಪಿ ರಾಜ್ಯ ರೈತ ಮೋರ್ಚಾದ ಅಧ್ಯಕ್ಷರಾಗಿ ನೇಮಕವಾಗಿರುವುದು ಸಂತಸದ ವಿಚಾರವಾಗಿದೆ ಎಂದರು.

    ಸನ್ಮಾನವನ್ನು ಸ್ವೀಕರಿಸಿದ ಈರಣ್ಣ ಕಡಾಡಿ ಮಾತನಾಡಿ, ಕಲ್ಲೋಳಿ ಜನರ ಪ್ರೀತಿ, ವಿಶ್ವಾಸ ಮತ್ತು ಸಹಕಾರದಿಂದಾಗಿ ರಾಜ್ಯಸಭಾ ಸದಸ್ಯ ಆಗುವಂಥ ಅವಕಾಶ ದೊರೆತಿದೆ. ಗ್ರಾಮೀಣ ಭಾಗದ ಬೆಳವಣಿಗೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಕಲ್ಲೋಳಿಯ ವೀರಭದ್ರೇಶ್ವರ ಅರ್ಬನ್ ಸೊಸೈಟಿ ಮತ್ತು ಬಸವೇಶ್ವರ ಸೊಸೈಟಿ ಸಿಬ್ಬಂದಿ ಕಡಾಡಿ ಅವರನ್ನು ಸನ್ಮಾನಿಸಿದರು. ಸೊಸೈಟಿ ಉಪಾಧ್ಯಕ್ಷ ಶಿವರುದ್ರ ಬಿ. ಪಾಟೀಲ, ನಿರ್ದೇಶಕರಾದ ಭೀಮಪ್ಪ ಕಡಾಡಿ, ಬಸಗೌಡ ಪಾಟೀಲ, ಎಂ.ಬಿ. ಖಾನಾಪುರ, ಆರ್.ಬಿ. ದಬಾಡಿ, ಎಚ್.ಡಿ. ಪರಕನಟ್ಟಿ, ಸುಭಾಷ ಖಾನಾಪುರ, ಬಸಪ್ಪ ಹೆಬ್ಬಾಳ, ಪ್ರಕಾಶ ಕಲಾಲ, ಆರ್.ಎನ್. ಶಿರಗಾಂವಕರ, ಮಹಾಂತೇಶ ಪಾಟೀಲ, ಕಾಡೇಶ ಗೋರೋಶಿ, ಬಾಳಣ್ಣ ಕಂಕಣವಾಡಿ, ರಮೇಶ ಕವಟಕೊಪ್ಪ, ಎಚ್.ಎಸ್. ಖಾನಗೌಡ್ರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts