ಮಾನ್ವಿ: ಬಡ ರೋಗಿಗಳ ಅನುಕೂಲಕ್ಕಾಗಿ ಗೌಸ್ ಓ ಖ್ವಾಜಾ ಅಂಜುಮಾನ್ ಕಮಿಟಿಯಿಂದ ಆರೋಗ್ಯದ ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗಿದೆ ಎಂದು ಶಾಸಕ ಹಂಪಯ್ಯ ನಾಯಕ ಹೇಳಿದರು.
ಇದನ್ನೂ ಓದಿ: ಉಚಿತ ಶಿಬಿರದಿಂದ ಬಡವರಿಗೆ ಅನುಕೂಲ
ಪಟ್ಟಣದಲ್ಲಿ ಗೌಸ್ ಓ ಖ್ವಾಜಾ ಅಂಜುಮಾನ್ ಕಮಿಟಿಯಿಂದ ಖಾಸಗಿ ಆಸ್ಪತ್ರೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ಆರೋಗ್ಯದ ಉಚಿತ ತಪಾಸಣೆ ಶಿಬಿರ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಖಾಸಗಿ ಆಸ್ಪತ್ರೆಗಳಲ್ಲಿ ರೋಗ ಪರೀಕ್ಷೆಗೆ ಸಾಕಷ್ಟ ಹಣ ನೀಡಬೇಕಾಗುತ್ತದೆ.
ಉಚಿತ ಶಿಬಿರಗಳಿಂದ ಬಡವರಿಗೆ ಸಹಾಯವಾಗಲಿದೆ ಎಂದರು. ಪ್ರಮುಖರಾದ ಸಮದಾನಿ ನಾಯ್ಕ, ಬಾಲಸ್ವಾಮಿ ಕೊಡ್ಲಿ, ಸೈಯದ್ ಖಾಲಿದ್ ಖಾದ್ರಿ, ಸೈಯದ್ ಮುದುಗಲ್ ಮಾಸ್ಟರ್, ಅಲ್ ಅಹಮ್, ಮಹಮ್ಮದ್ ಇಲಿಯಾಸ್, ಸೈಯದ್ ಜಾವಿದ್ ಆಸ್ಮಿ, ಮುಸ್ತಫಾ ಬಾಗಲಕೋಟೆ ಇದ್ದರು.