More

    ದೇವಸ್ಥಾನಗಳಿಗೆ ದೇಸಿ ಗೋತಳಿ ಉಚಿತ ಗಂಡು ಕರು

    ಮಂಗಳೂರು: ಕಾರ್ಕಳದ ಸಂಜೀವಿನಿ ಫಾರ್ಮ್ಸ್ ಆಂಡ್ ಡೇರಿಯಲ್ಲಿ ಇರುವ ಗೋಧಾಮದಲ್ಲಿ ಭಾರತೀಯ ತಳಿಗಳನ್ನು ಸಾಕಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಜತೆಗೆ ಸಾರ್ವಜನಿಕರಿಗೆ ಉಪಯುಕ್ತವಾಗುವ ಸಾವಯವ ರೀತಿಯ ಆಯುರ್ವೇದ ಅಂಶಗಳನ್ನು ಒಳಗೊಂಡ ಪರಿಶುದ್ಧ ಹಾಲನ್ನು ಮನೆ ಮನೆಗೆ ತಲುಪಿಸಲಾಗುತ್ತದೆ.

    ಮೂಡುಬಿದಿರೆಯ ಎಸ್‌ಕೆಎಫ್ ಸಮೂಹ ಸಂಸ್ಥೆಯ ಮಾಲೀಕ ರಾಮಕೃಷ್ಣ ಆಚಾರ್ ದಂಪತಿ ಕನಸಿನ ಕೂಸಾಗಿರುವ ಸಂಜೀವಿನಿ ಫಾರ್ಮ್ಸ್ ಡೇರಿಯಲ್ಲಿ ದೇಶೀಯ ತಳಿಗಳಾದ ಗುಜರಾತ್‌ನ ಕತಿಯವಾಡ್, ಗಿರ್ ಕಾಡುಗಳಲ್ಲಿ ಇರುವ ಗಿರ್ ದನಗಳು, ಪಂಜಾಬ್ ಮೂಲದ ಸಾಹಿವಾಲ, ರಾಜಸ್ಥಾನದ ರಾಥಿ, ಥಾಪಾರ್ಕರ್ ಮೂಲ ಪಾಕಿಸ್ತಾನದ ಸಿಂದ್ ಪ್ರದೇಶ, ಗುಜರಾತ್ ಮತ್ತು ರಾಜಸ್ಥಾನದಲ್ಲಿ ಕಂಡು ಬರುವ ಕಾಂಕ್ರೆಜ ಜಾತಿಯ ದನಗಳನ್ನು ಸಾಕುತ್ತಿದ್ದಾರೆ.

    ರಾಮಕೃಷ್ಣ ಆಚಾರ್ ಸಂಜೀವಿನಿ ಫಾರ್ಮ್ಸ್‌ನಲ್ಲಿ ಸಾಕುತ್ತಿರುವ ವಿವಿಧ ಜಾತಿಯ ಭಾರತೀಯ ತಳಿಯ ಗಂಡು ಕರುಗಳನ್ನು (ಬಸವ) ದೇವಸ್ಥಾನಕ್ಕೆ ನೀಡುವ ಸಂಕಲ್ಪ ತಳೆದಿದ್ದಾರೆ. ಜಿಲ್ಲೆಯ ಮತ್ತು ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ಗಂಡು ಕರುಗಳನ್ನು ದಿನ ನಿತ್ಯದ ದೇವರ ಸೇವೆಯ ಕಾರ್ಯಕ್ರಮಗಳಲ್ಲಿ ಬಳಸುತ್ತಾರೆ. ಯಾವುದೇ ದೇವಸ್ಥಾನಗಳಿಗೆ ಗಂಡು ಕರು ಅವಶ್ಯಕತೆ ಇದ್ದರೆ ಕಾರ್ಕಳದ ಮುನಿಯಾಲ್‌ನ ಸಂಜೀವಿನಿ ಫಾರ್ಮ್ಸ್ ಸಂಪರ್ಕಿಸಿ ಉಚಿತವಾಗಿ ಪಡೆಯಬಹುದು ಎಂದು ರಾಮಕೃಷ್ಣ ಆಚಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts