ಬೆಂಗಳೂರು: ಕನ್ನಡಿಗ ಎಸ್ಡಿ ಪ್ರಜ್ವಲ್ ದೇವ್ ಮಂಡ್ಯದಲ್ಲಿ ನಡೆಯುತ್ತಿರುವ ಐಟಿಎ್ ಪುರುಷರ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ನಿರಾಸೆ ಕಂಡಿದ್ದಾರೆ. ಇತರ ಭಾರತೀಯರಾದ ಕರಣ್ ಸಿಂಗ್, ವಿಷ್ಣುವರ್ಧನ್, ಮಧ್ವಿನ್ ಕಾಮತ್ ಹಾಗೂ ಶಶಿಕುಮಾರ್ ಮುಕುಂದ್ ಪ್ರಿ ಕ್ವಾರ್ಟರ್ೈನಲ್ಗೇರಿದ್ದಾರೆ.
ಬುಧವಾರ ನಡೆದ ಪಂದ್ಯದಲ್ಲಿ ಮೈಸೂರಿನ ಪ್ರಜ್ವಲ್ ದೇವ್ 2-6, 7-5, 5-7 ಸೆಟ್ಗಳಿಂದ ಕೊರಿಯಾದ ಯುನ್ಸೋಕ್ ಜಂಗ್ ವಿರುದ್ಧ ಪರಾಭವಗೊಂಡರು. 20 ವರ್ಷದ ಕರಣ್ ಸಿಂಗ್ 3-6, 6-3, 6-2 ರಿಂದ 7ನೇ ಶ್ರೇಯಾಂಕಿತ ತೈಪೆಯ ತ್ಸುಂಗ್ ಹೊ ಹೌಂಗ್ಗೆ ಶಾಕ್ ನೀಡಿ 16ರ ಘಟ್ಟಕ್ಕೆ ಲಗ್ಗೆಯಿಟ್ಟರು.
4ನೇ ಶ್ರೇಯಾಂಕಿತ ಶಶಿಕುಮಾರ್ ಮುಕುಂದ್ 6-3, 6-4ರಿಂದ ದೇಶ ಬಾಂಧವ ಕಬೀರ್ ಹಾನ್ಸ್ ಎದುರು ಗೆದ್ದರೆ, ಡೇವಿಸ್ ಕಪ್ನ ಮಾಜಿ ಆಟಗಾರ ವಿಷ್ಣುವರ್ಧನ್ 6-3,3-6,6-4 ರಿಂದ ಆಸ್ಟ್ರೀಯಾದ ಡೇವಿಡ್ ಪಿಚಲೆರ್ ವಿರುದ್ಧ ಗೆದ್ದು ಬೀಗಿದರು. ಮಧ್ವಿನ್ ಕಾಮತ್ 6-3, 7-6(6) ಕಜಾಕ್ಸ್ತಾನದ ಗ್ರಿಗೋರಿ ಲೋಮಕಿನ್ ಅವರನ್ನು ಮಣಿಸಿದರು.