ವೈಶಾಲಿ: ರಸ್ತೆ ಪಕ್ಕದ ಮೈದಾನದಲ್ಲಿ ಮಲಗಿದ್ದವರು ಚಾಲಕನ ಅಚಾತುರ್ಯದಿಂದ ಪ್ರಾಣ ಬಿಟ್ಟ ಘಟನೆ ನಿನ್ನೆ ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಯಾದವ್ ದುಃಖವನ್ನು ವ್ಯಕ್ತಪಡಿಸಿದ್ದರು. ಇಂದು ಆ ಟ್ರಕ್ ಚಲಾಯಿಸುತ್ತಿದ್ದ ಚಾಲಕ ಹೇಳಿಕೆ ನೀಡಿದ್ದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ!
ನಿನ್ನೆ ಪ್ರಧಾನಿ ಮೋದಿ ಅಪಘಾತದಲ್ಲಿ ಗಾಯಗೊಂಡ ಪ್ರತಿಯೊಬ್ಬರಿಗೂ 50,000 ರೂ. ಮತ್ತು ಮೃತಪಟ್ಟವರ ಓರ್ವ ಸಂಬಂಧಿಗೆ 2 ಲಕ್ಷ ರೂ. ಹಣವನ್ನು ಪ್ರಧಾನಮಂತ್ರಿ ನ್ಯಾಷನಲ್ ರಿಲೀಫ್ ಫಂಡ್ನಿಂದ ನೀಡಿದ್ದಾರೆ. ಅದೇ ಬಿಹಾರದ ಸಿಎಂ ನಿತೀಶ್ ಕುಮಾರ್ ಯಾದವ್ ಕೂಡ ಗಾಯಗೊಂಡವರ ಚಿಕಿತ್ಸೆಯ ಖರ್ಚು ಮತ್ತು ಮೃತಪಟ್ಟವರಿಗೆ ಪರಿಹಾರ ಧನವನ್ನು ಘೋಷಿಸಿದ್ದಾರೆ.
ವಿಶೇಷ ಸುದ್ದಿ ಏನಪ್ಪಾ ಎಂದರೆ ಇಂದು ಆ ಟ್ರಕ್ ಚಲಾಯಿಸುತ್ತಿದ್ದ ಚಾಲಕ ಹೇಳಿಕೆ ನೀಡಿದ್ದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಆ ಟ್ರಕ್ ಚಾಲಕ ಏನು ಹೇಳಿರಬಹುದು ಎಂದು ಊಹಿಸುತ್ತೀರಾ? ಟ್ರಕ್ ಚಾಲಕ ಲಾಲು ಕುಮಾರ್ 40 ರೂ. ಬೆಲೆಯ ದೇಸಿ ಮದ್ಯ ಸೇವಿಸಿ ಟ್ರಕ್ ಚಲಾಯಿಸಿದ್ದನಂತೆ! ಈತ ಮತ್ತೊಂದು ಟ್ರಕ್ಅನ್ನು ಓವರ್ ಟೇಕ್ ಮಾಡುವಾಗ ಈ ದುರ್ಘಟನೆ ಸಂಭವಿಸಿದೆ.
ಲಾಲೂ ಕಮಾರ್ನ ರಕ್ತ ಪರೀಕ್ಷೆ ಮತ್ತು ಬ್ರೆಥ್ ಅನಲೈಝರ್ ಪರೀಕ್ಷೆ ಮೂಲಕ ಆತ ಮದ್ಯ ಸೇವಿಸುತ್ತಿದ್ದ ಎನ್ನುವ ವಿಷಯ ಧೃಢಪಟ್ಟಿದೆ ಎಂದು ವೈಶಾಲಿ ಜಿಲ್ಲೆಯ ಎಸ್ಪಿ ಮನಿಶ್ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)