ಬೆಂಗಳೂರು: ಕಂಪನಿ ಮಾಲೀಕನ ಬ್ಯಾಂಕ್ ಖಾತೆಯಿಂದ ಬಾಯ್ಫ್ರೆಂಡ್ ಖಾತೆಗೆ ಹಣ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರಣ್ಯಪುರ ಠಾಣಾ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ನಕ್ಷು ಕುಶಾಲಪ್ಪ, ಗಯನಾ ಅಲಿಯಾಸ್ ರಿಯಾ, ಜಾನು ಅಲಿಯಾಸ್ ರೀತ್ ಮತ್ತು ಜ್ಞಾನವಿ ಅಲಿಯಾಸ್ ರೀತು ಎಂದು ಗುರುತಿಸಲಾಗಿದೆ. ವೆಂಕಟೇಶ್ ರೆಡ್ಡಿ ಎಂಬಾತನ ಕಂಪನಿಯಲ್ಲಿ ರಿಸಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ರೀತುಗೆ ಕಂಪನಿಯ ಕೆಲ ವ್ಯವಹಾರ, ಅಕೌಂಟ್ ಸಂಬಂಧಿತ ಕೆಲಸಗಳನ್ನೂ ಮಾಲೀಕ ನೀಡಿದ್ದರು.
ಇದನ್ನೂ ಓದಿ: ಆದಾಯ ತೆರಿಗೆ ಇಲಾಖೆ ಹೆಸರಿನಲ್ಲಿ ನಕಲಿ ಆ್ಯಪ್: ಆನ್ಲೈನ್ನಲ್ಲಿ ಟ್ಯಾಕ್ಸ್ ಸ್ವೀಕರಿಸುವ ನೆಪದಲ್ಲಿ ಮೋಸ
ಕಚೇರಿ ವ್ಯವಹಾರದ ಹಣ ವರ್ಗಾವಣೆ ಸಮಯದಲ್ಲಿ ತನ್ನ ಹಾಗೂ ತನ್ನ ಸಹೋದರಿಯರ ಬಾಯ್ಫ್ರೆಂಡ್ಗಳ ಬ್ಯಾಂಕ್ ಖಾತೆಗೂ ಹಣ ವರ್ಗಾವಣೆ ಮಾಡುತ್ತಿದ್ದಳು. ಈವರೆಗೆ 2 ಲಕ್ಷದ 70ಸಾವಿರ ರೂ. ಹಣ ವರ್ಗಾವಣೆ ಮಾಡಿ, ವಂಚನೆ ಎಸಗಿದ್ದಳು. ಈ ಸಂಬಂಧ ವಿದ್ಯಾರಣ್ಯಪುರ ಠಾಣೆಗೆ ವೆಂಕಟೇಶ್ ರೆಡ್ಡಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ವಿದ್ಯಾರಣ್ಯಪುರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್)
ಆದಾಯ ತೆರಿಗೆ ಇಲಾಖೆ ಹೆಸರಿನಲ್ಲಿ ನಕಲಿ ಆ್ಯಪ್: ಆನ್ಲೈನ್ನಲ್ಲಿ ಟ್ಯಾಕ್ಸ್ ಸ್ವೀಕರಿಸುವ ನೆಪದಲ್ಲಿ ಮೋಸ
ಸೀಮೆಬದನೆ ರೂಪದ ಮಾವಿನ ಹಣ್ಣು! ಉಡುಪಿಯಲ್ಲಿ ಪ್ರಕೃತಿ ವೈಚಿತ್ರ್ಯ ಪತ್ತೆ…
ಆರೋಪ ಸಾಬೀತು ಮಾಡಿದರೆ ಸರ್ಕಲ್ನಲ್ಲಿ ನೇಣು ಹಾಕಿಕೊಂಡು ಸಾಯುವೆ ಎಂದು ಸವಾಲೆಸೆದ ಪರಾಜಿತ ಅಭ್ಯರ್ಥಿ!