More

    ಕಾಂಗ್ರೆಸ್​ನ ದಲಿತ ನಾಯಕನಿಗೆ 60ನೇ ವಯಸ್ಸಿಗೆ ಕೂಡಿ ಬಂತು ಕಂಕಣ ಭಾಗ್ಯ

    ನವದೆಹಲಿ: ಕಾಂಗ್ರೆಸ್​ನ ಮಾಜಿ ಕೇಂದ್ರ ಸಚಿವ ಮತ್ತು ಪ್ರಧಾನ ಕಾರ್ಯದರ್ಶಿ ಮುಕುಲ್​ ವಾಸ್ನಿಕ್​ ಅವರು ಇಳಿ ವಯಸ್ಸಿನಲ್ಲಿ ಹಸೆಮಣೆ ಏರಿದ್ದಾರೆ. 60 ವರ್ಷ ವಯಸ್ಸಿನ ಅವರು ತಮ್ಮ ಸ್ನೇಹಿತೆ ರವೀನ್​ ಖುರಾನಾ ಜತೆ ದಾಂಪತ್ಯ ಜೀವನವನ್ನು ಆರಂಭಿಸಿದ್ದಾರೆ.

    ಪಂಚತಾರಾ ಹೋಟೆಲ್​ನಲ್ಲಿ ನಡೆದ ಮದುವೆ ಸಂಭ್ರಮದಲ್ಲಿ ಹಲವು ಗಣ್ಯಾತಿಗಣ್ಯರು ಭಾಗವಹಿಸಿದ್ದರು. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​, ಕಾಂಗ್ರೆಸ್​ನ ಹಿರಿಯ ಮುಖಂಡರಾದ ಅಹ್ಮದ್​ ಪಟೇಲ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.

    ನೂತನ ಜೀವನವನ್ನು ಆರಂಭಿಸಿರುವ ಮುಕುಲ್​ ವಾಸ್ನಿಕ್​ ದಂಪತಿಗೆ ಅಶೋಕ್​ ಗೆಹ್ಲೋಟ್​, ಮಾಜಿ ಕೇಂದ್ರ ಸಚಿವ ಮನೀಶ್​ ತಿವಾರಿ ಸೇರಿದಂತೆ ಕಾಂಗ್ರೆಸ್​ನ ಅನೇಕ ನಾಯಕರು ಟ್ವಿಟ್ಟರ್​ನಲ್ಲಿ ಶುಭಹಾರೈಸಿದ್ದಾರೆ.

    ದಲಿತ ರಾಜಕಾರಣಿಯಾಗಿರುವ ಮುಕುಲ್​ ವಾಸ್ನಿಕ್​ ಮಹಾರಾಷ್ಟ್ರದ ಪ್ರಸಿದ್ಧ ನಾಯಕ ಬಾಲಕೃಷ್ಣ ಅವರ ಮಗ. 2009ರಿಂದ 2012ರವರೆಗೆ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಇವರನ್ನು ಕಾಂಗ್ರೆಸ್​ನಿಂದ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಲಾಗುವುದು ಎನ್ನುವ ಸುದ್ದಿಗಳು ಹರಿದಾಡಿತ್ತು. (ಏಜೆನ್ಸೀಸ್​)

    ಡಿಜಿಟಲ್ ವೋಟರ್ ಕಾರ್ಡ್​ಗೆ ಚುನಾವಣಾ ಆಯೋಗ ಒಲವು

    ಯೆಸ್​ ಬ್ಯಾಂಕ್​ ಸಂಸ್ಥಾಪಕನ ಬೆನ್ನತ್ತಿದ ಇ.ಡಿ., ಸಿಬಿಐ ಅಧಿಕಾರಿಗಳು; ಏರ್​ಪೋರ್ಟ್​ನಲ್ಲಿ ಸಿಕ್ಕಿಬಿದ್ದ ಪುತ್ರಿ ರೋಶಿಣಿ ಕಪೂರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts