ಅಂಕೋಲಾ: ಉತ್ತರ ಕನ್ನಡದ ಕಾರವಾರ ತಾಲೂಕು ಸೇರಿ ಕರಾವಳಿ ಭಾಗ ಪ್ರತ್ಯೇಕ ಜಿಲ್ಲೆ ಆಗಬೇಕು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ವಿವಿಧ ಮಜಲುಗಳಲ್ಲಿ ಹೋರಾಟ ಮಾಡಲಾಗುತ್ತದೆ. ಈ ಹೋರಾಟಕ್ಕೆ ಜನಪತ್ರಿನಿಧಿಗಳ ಸಹಕಾರ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸುನೀಲ ಎಸ್. ನಾಯ್ಕ ಹೊನ್ನೆಕೇರಿ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಿಯಾದಲ್ಲಿ ಅದು ಘಟ್ಟದ ಮೇಲೆ ಹೋಗುತ್ತದೆ. ಆ ಭಾಗದಲ್ಲಿ ಮಂತ್ರಿಗಳು ಸೇರಿ ಪ್ರಭಾವಿ ರಾಜಕಾರಣಿಗಳಿದ್ದಾರೆ. ಮುಂದಿನ ಜನಾಂಗದ ಅಭಿವೃದ್ಧಿ ದೃಷ್ಟಿಯಿಂದ ಕರಾವಳಿ ಭಾಗವು ಪ್ರತ್ಯೇಕ ಜಿಲ್ಲೆಗೆ ಸೂಕ್ತವಾಗಿದೆ ಎಂದರು. ಮಾದೇವ ಬೇಲಿಫ್ ಕೇಣಿ, ಪ್ರಸನ್ನ ಕೆ. ನಾಯ್ಕ, ರತ್ನಾಕರ ಗೌಡ, ಪ್ರಶಾಂತ ನಾಯ್ಕ, ಸಂದೀಪ ನಾಯ್ಕ ಇದ್ದರು.