More

    ಸಾಧನೆಗೆ ಬಡತನ, ಕಷ್ಟ ಪ್ರೇರಣೆ

    ಕಾಗವಾಡ: ಶಿಕ್ಷಣ ಹುಲಿಯ ಹಾಲಿದ್ದಂತೆ, ಅದನ್ನು ಕುಡಿದವರು ಹುಲಿಯಂತೆ ಗರ್ಜಿಸಲೇಬೇಕು. ನೋವು, ಬಡತನ ಮತ್ತು ಕಷ್ಟಗಳು ಏನಾದರೂ ಸಾಧಿಸಲು ಪ್ರಚೋದಿಸುತ್ತವೆ ಎಂದು ಸಾಹಿತಿ ಡಾ.ಎಸ್.ಎಸ್.ಎಂಟೆತ್ತಿನವರ ಹೇಳಿದರು.

    ಪಟ್ಟಣದ ಶಿವಾನಂದ ಮಹಾವಿದ್ಯಾಲಯದ ಐಕ್ಯೂಎಸಿ ಅಡಿಯಲ್ಲಿ 2023-24ನೇ ಸಾಲಿನ ಕಾಲೇಜು ಒಕ್ಕೂಟ ಹಾಗೂ ಕರ್ನಾಟಕ ಸಾಂಸ್ಕೃತಿಕ ಸಂಘವನ್ನು ಈಚಗೆ ಉದ್ಘಾಟಿಸಿ ಮಾತನಾಡಿದರು.

    ಅಧ್ಯಕ್ಷತೆ ವಹಿಸಿದ್ದ ಡಾ.ಎಸ್.ಎ. ಕರ್ಕಿ ಮಾತನಾಡಿ, ಶಿಕ್ಷಣ ಹರಿಯುವ ನೀರು. ಅದರೊಂದಿಗೆ ನೈತಿಕತೆ ಅತ್ಯವಶ್ಯ. ಉತ್ತಮ ಭವಿಷ್ಯಕ್ಕಾಗಿ ಕಲೆ, ಕೌಶಲ ಪ್ರದರ್ಶಿಸಿ, ಇತರರಿಗೆ ಮಾದರಿಯಾಗಬೇಕು ಎಂದರು.

    ಶ್ರೀ ಮಲ್ಲಿಕಾರ್ಜುನ ಆಶ್ರಮ ಟ್ರಸ್ಟ್‌ನ ಯತೀಶ್ವರಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಘದ ಕಾರ್ಯಾಧ್ಯಕ್ಷ ಡಾ.ಎಸ್.ಪಿ. ತಳವಾರ ಮಾತನಾಡಿದರು.
    ಆಡಳಿತ ಮಂಡಳಿ ಕಾರ್ಯದರ್ಶಿ ಪ್ರೊ.ಬಿ.ಎ. ಪಾಟೀಲ, ಉಪ ಪ್ರಾಚಾರ್ಯ ಡಾ.ಡಿ.ಡಿ.ನಗರಕರ, ಪ್ರೊ. ಜೆ.ಕೆ. ಪಾಟೀಲ, ಪ್ರೊ.ಎಸ್.ಎಸ್. ಫಡತರೆ, ಪ್ರೊ.ಎಸ್.ಡಿ. ಬಿರಾದಾರ, ಪ್ರೊ.ಬಿ.ಡಿ. ಧಾಮಣ್ಣವರ, ವಿದ್ಯಾರ್ಥಿಗಳಾದ ಅಭಿಷೇಕ ತಳವಾರ, ಸಾಧಿಕಾ ಚಿಕ್ಕನರಸೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts