More

    ಊಟದ ವಿಚಾರಕ್ಕೆ ಜಗಳ: ರಾಮನಗರದಲ್ಲಿ ತಾಯಿ-ಮಗ ದುರಂತ ಅಂತ್ಯ

    ರಾಮನಗರ: ಊಟದ ವಿಚಾರಕ್ಕೆ ಶುರುವಾದ ಜಗಳ ತಾಯಿ-ಮಗನ ಸಾವಲ್ಲಿ ಅಂತ್ಯ ಕಂಡ ಘಟನೆ ರಾಮನಗರದ ಕುಮಾರಸ್ವಾಮಿ ಬಡಾವಣೆಯಲ್ಲಿ ಸಂಭವಿಸಿದೆ.

    ವಿಜಯಲಕ್ಷ್ಮಿ(45) ಮತ್ತು ಇವರ ಪುತ್ರ ಹರ್ಷ (24) ಮೃತ ದುರ್ದೈವಿಗಳು. ವಿಜಯಲಕ್ಷ್ಮಿ ಕುಟುಂಬ ಬೇಕರಿ ಇಟ್ಟುಕೊಂಡು ಜೀವನ ಸಾಗಿಸುತ್ತಿತ್ತು. ನಿನ್ನೆ(ಶುಕ್ರವಾರ) ತಡರಾತ್ರಿ ಊಟ ಹಾಕಿಕೊಡುವ ವಿಚಾರಕ್ಕೆ ತಾಯಿ-ಮಗ ನಡುವೆ ಶರುವಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದೆ.

    ಗಲಾಟೆಯಿಂದ ಬೇಸತ್ತ ತಾಯಿ ಮನೆ ಮುಂದಿನ ನೀರಿನ ಸಂಪಿಗೆ ಬಿದ್ದು ಮೃತಪಟ್ಟಿದ್ದಾರೆ. ತಾಯಿಯ ಸಾವಿಂದ ಕಂಗೆಟ್ಟ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ತಾಯಿ-ಮಗ ದುರಂತ ಅಂತ್ಯ ಕಂಡದ್ದು ವಿಪರ್ಯಾಸ.

    ಸ್ಥಳಕ್ಕೆ ಐಜೂರು ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು. ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಐಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಎಲ್ರ ಜಾತಕ ನನ್ನ ಕೈಯಲ್ಲಿದೆ.. ಹುಷಾರ್! ಏನ್​ ಮಾಡ್ಬೇಕು ಅಂತ ನನ್ಗೆ ಗೊತ್ತು… ಪೊಲೀಸರಿಗೆ ಸ್ಯಾಂಟ್ರೋ ರವಿ ಅವಾಜ್​

    ಎರಡ್ಮೂರು ದೊಡ್ಡದೊಡ್ಡ ತಲೆಗಳು ಉರುಳುತ್ತವೆ, ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರುತ್ತೆ: ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು

    ಪೊಲೀಸರಿಗೆ ಸಿಕ್ಕಿಬಿದ್ದ ಸ್ಯಾಂಟ್ರೋ ರವಿಯ ಅಸಲಿ ಮುಖ ಇದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts