ರಾಮನಗರ: ಊಟದ ವಿಚಾರಕ್ಕೆ ಶುರುವಾದ ಜಗಳ ತಾಯಿ-ಮಗನ ಸಾವಲ್ಲಿ ಅಂತ್ಯ ಕಂಡ ಘಟನೆ ರಾಮನಗರದ ಕುಮಾರಸ್ವಾಮಿ ಬಡಾವಣೆಯಲ್ಲಿ ಸಂಭವಿಸಿದೆ.
ವಿಜಯಲಕ್ಷ್ಮಿ(45) ಮತ್ತು ಇವರ ಪುತ್ರ ಹರ್ಷ (24) ಮೃತ ದುರ್ದೈವಿಗಳು. ವಿಜಯಲಕ್ಷ್ಮಿ ಕುಟುಂಬ ಬೇಕರಿ ಇಟ್ಟುಕೊಂಡು ಜೀವನ ಸಾಗಿಸುತ್ತಿತ್ತು. ನಿನ್ನೆ(ಶುಕ್ರವಾರ) ತಡರಾತ್ರಿ ಊಟ ಹಾಕಿಕೊಡುವ ವಿಚಾರಕ್ಕೆ ತಾಯಿ-ಮಗ ನಡುವೆ ಶರುವಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದೆ.
ಗಲಾಟೆಯಿಂದ ಬೇಸತ್ತ ತಾಯಿ ಮನೆ ಮುಂದಿನ ನೀರಿನ ಸಂಪಿಗೆ ಬಿದ್ದು ಮೃತಪಟ್ಟಿದ್ದಾರೆ. ತಾಯಿಯ ಸಾವಿಂದ ಕಂಗೆಟ್ಟ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ತಾಯಿ-ಮಗ ದುರಂತ ಅಂತ್ಯ ಕಂಡದ್ದು ವಿಪರ್ಯಾಸ.
ಸ್ಥಳಕ್ಕೆ ಐಜೂರು ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು. ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಐಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಲ್ರ ಜಾತಕ ನನ್ನ ಕೈಯಲ್ಲಿದೆ.. ಹುಷಾರ್! ಏನ್ ಮಾಡ್ಬೇಕು ಅಂತ ನನ್ಗೆ ಗೊತ್ತು… ಪೊಲೀಸರಿಗೆ ಸ್ಯಾಂಟ್ರೋ ರವಿ ಅವಾಜ್