More

    ಜ್ಞಾನಸೂರ್ಯ ತಂಡಕ್ಕೆ ಪ್ರಥಮ ಸ್ಥಾನ

    ಸರಗೂರು: ರಾಜಮ್ಮ-ಲಿಂಗಯ್ಯ ಫೌಂಡೇಷನ್, ಪ್ರಗತಿ ವಿದ್ಯಾಸಂಸ್ಥೆ ವತಿಯಿಂದ ಪ್ರಗತಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಧರ್ಮದರ್ಶಿ ಎಚ್.ಲಿಂಗಯ್ಯ ಅವರ ಸ್ಮರಣಾರ್ಥ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಪುರುಷರ ವಾಲಿಬಾಲ್ ಪಂದ್ಯಾವಳಿಯಲ್ಲಿ ಸರಗೂರು ಜ್ಞಾನಸೂರ್ಯ ತಂಡ ಪ್ರಥಮ ಸ್ಥಾನ ಪಡೆಯಿತು.

    ಅಂತಿಮ ಪಂದ್ಯಾವಳಿಯಲ್ಲಿ ನಡೆದ ಸೆಣದಾಟದಲ್ಲಿ ದ್ವಿತೀಯ ಬಹುಮಾನವನ್ನು ಸರಗೂರು ಕಾಲೇಜು ಬಾಯ್ಸ್ ತಂಡ ತನ್ನದಾಗಿಸಿಕೊಂಡಿತು.
    ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಆರೋಗ್ಯವೇ ಪರಮ ಭಾಗ್ಯ. ಆರೋಗ್ಯ ಮತ್ತು ಕ್ರೀಡೆಗೆ ಮಹತ್ವ ನೀಡುವುದರ ಜತೆಗೆ ಓದಿನ ಕಡೆಯೂ ಗಮನಹರಿಸಬೇಕು ಎಂದು ತಿಳಿಸಿದರು.

    ಪಪಂ ಸದಸ್ಯ ಚಲುವಕೃಷ್ಣ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೆಂಡಗಣ್ಣಸ್ವಾಮಿ, ಆಡಳಿತಧಿಕಾರಿ ಮುರಳೀಧರ್, ಮುಖ್ಯ ಶಿಕ್ಷಕ ಎಚ್.ಎಸ್.ಸತೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts