ವಿಶಾಖಪಟ್ಟಣಂ ಮೀನುಗಾರಿಕಾ ಬಂದರಿನಿಂದ ಕೆಲವೇ ಅಂತರಗಳಷ್ಟು ದೂರ ಮೀನುಗಾರಿಕೆಗೆ ತೆರಳಿದ್ದ ದೋಣಿಯಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
ಬಂದರಿನಿಂದ ಕಣ್ಣಳತೆ ದೂರಲ್ಲಿ ಸಮುದ್ರದ ಮಧ್ಯ ಬೋಟ್ನಿಂದ ಕಪ್ಪಾದ ಹೊಗೆ ಹೋಗುತ್ತಿರುವ ಫೋಟೋ ವೈರಲ್ ಆಗಿದೆ.
ಮೀನುಗಾರಿಕಾ ದೋಣಿಯಲ್ಲಿ ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಆಂಧ್ರಪ್ರದೇಶ ಬಂದರು ಠಾಣೆ ಪೊಲೀಸರು ತಿಳಿಸಿದ್ದಾರೆ. ಹಾಗೇ, ಯಾವುದೇ ಸಾವು-ನೋವು ಉಂಟಾಗಲಿಲ್ಲ ಎಂದೂ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: VIDEO| ಏಲಿಯನ್ ರೀತಿಯ ಮೇಕೆ: ಮೂಗಿಲ್ಲ ಆದ್ರೆ ಬಾಯಿಯೊಳಗಿದೆ ಕಣ್ಣು, ವಿಚಿತ್ರ ಹುಟ್ಟಿಗೆ ಕಾರಣವೇನು?
ಸಾಗರದಲ್ಲಿರುವ ದೋಣಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದನ್ನು ಮೊದಲು ಪೊಲೀಸ್ ಅಧಿಕಾರಿಯೋರ್ವ ಮೊದಲು ನೋಡಿದ್ದಾರೆ. ಅದರಲ್ಲಿರುವ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ ಎಂದು ವಿಶಾಖಪಟ್ಟಣಂ ಡಿಸಿಪಿ ಸುರೇಶ್ ಬಾಬು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)
ಕೋವಿಡ್19: ಮರಣ ದರ ತಗ್ಗಿಸುವಲ್ಲಿ ಕ್ರಮ ಕೈಗೊಳ್ಳಬೇಕೆಂದು ರಾಜ್ಯಗಳಿಗೆ ಕೇಂದ್ರದ ಸೂಚನೆ