ಹಾಸನ: ಕ್ಷುಲ್ಲಕ ಕಾರಣಕ್ಕೆ ಸೈನಿಕರಿಬ್ಬರ ಕುಟುಂಬಗಳ ಮಧ್ಯೆ ಮಾರಾಮಾರಿಯಾಗಿದ್ದು, ಜಗಳ ವಿಕೋಪಕ್ಕೆ ತೆರಳಿ ಒಬ್ಬ ಸೈನಿಕ ಇನ್ನೊಬ್ಬ ಸೈನಿಕನ ತಮ್ಮನನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಹಾಸನ ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ತಿರುಮನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗಲಾಟೆಯ ವಿಡಿಯೋ ಕೂಡ ಮೊಬೈಲ್ಫೋನ್ ಒಂದರಲ್ಲಿ ಸೆರೆಯಾಗಿದೆ. ಯೋಧರಾದ ಯತೀಶ್ ಮತ್ತು ಚಂದನ್ ಅವರ ಮನೆಯವರ ಮಧ್ಯೆ ಈ ಜಗಳ ನಡೆದಿದೆ. ಈ ಜಗಳಲ್ಲಿ ಯತೀಶ್ ತಮ್ಮ ಯಶ್ವಂತ್ ಮೇಲೆ ಚಂದನ್ ಮಾರಣಾಂತಿಕ ಹಲ್ಲೆ ನಡೆಸಿದ್ದು, ಆತ ಸಾವಿಗೀಡಾಗಿದ್ದಾನೆ.
ಚಂದನ್ನಿಂದ ಹಲ್ಲೆಗೆ ಒಳಗಾದ ಯಶ್ವಂತ್ (25) ಗಂಭೀರ ಗಾಯಗೊಂಡು ತೀವ್ರ ರಕ್ತಸ್ರಾವಕ್ಕೀಡಾಗಿದ್ದು, ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ. ಈ ಜಗಳದಲ್ಲಿ ಯೋಧ ಸತೀಶ್ ಮೇಲೂ ಹಲ್ಲೆ ನಡೆದಿದ್ದು, ಆತನೂ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ನ. 19ರಂದು ಜಾಗದ ಸರ್ವೆ ನಡೆಸುವ ಸಂದರ್ಭ ಈ ಜಗಳವಾಗಿದ್ದು, ಗ್ರಾಮ ಪಂಚಾಯತ್ ಅಧಿಕಾರಿಗಳು ಸರ್ವೇ ಕಾರ್ಯ ಮುಗಿಸಿಹೋದ ಬಳಿಕ ಮಾರಾಮಾರಿ ನಡೆದಿದೆ. ಯೋಧ ಚಂದನ್, ಆತನ ತಮ್ಮ ಅಶ್ವಥ್ ಮತ್ತು ಯೋಧ ಯತೀಶ್ ಹಾಗೂ ಆತನ ತಮ್ಮ ಯಶ್ವಂತ್ ನಡುವೆ ಪ್ರಾರಂಭವಾದ ಜಗಳ ವಿಕೋಪಕ್ಕೆ ತೆರಳಿತ್ತು. ಚಂದನ್ ಮಚ್ಚಿನಿಂದ ಯಶ್ವಂತ್ ಮೇಲೆ ಹಲ್ಲೆ ನಡೆಸಿದ್ದು, ಆತ ಕುಸಿದು ಬಿದ್ದು ತೀವ್ರ ರಕ್ತಸ್ರಾವಕ್ಕೆ ಒಳಗಾಗಿದ್ದು. ಚಂದನ್ ಮತ್ತವನ ಸ್ನೇಹಿತರು ಯತೀಶ್ ಮೇಲೂ ಹಲ್ಲೆ ನಡೆಸಿದ್ದು, ಗಾಯಗೊಂಡ ಆತನನ್ನು ಬಳಿಕ ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡಿರುವ ಯತೀಶ್ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ. ಹಳೇಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಎರಡನೇ ಹೆಂಡ್ತಿಯಂತೆ ನಾಲ್ಕನೇ ಪತ್ನಿಯನ್ನೂ ಕಟ್ಟಿಗೆಯಿಂದ ಹೊಡೆದು ಕೊಂದ ಪಾನಮತ್ತ ಪತಿ!
ಗೃಹಪ್ರವೇಶದ ಮರುದಿನವೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ; ಮಗಳಿಂದಲೇ ಅಂತಿಮಸಂಸ್ಕಾರ..