ಶಿವಮೊಗ್ಗ: ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ವಸತಿ ನಿಲಯಗಳಲ್ಲಿ ಕರಾಟೆ ತರಬೇತಿ ನೀಡಿದ ಮಹಿಳಾ ಕರಾಟೆ ತರಬೇತಿದಾರರಿಗೆ ಅಗತ್ಯ ಗೌರವಧನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಜಿಲ್ಲಾ ತರಬೇತುದಾರರ ಒಕ್ಕೂಟದ ಅಧ್ಯಕ್ಷೆ ಮಂಜುಳಾ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಸಮಾಜ ಕಲ್ಯಾಣ ಇಲಾಖೆಯಡಿ 2021-22ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕರಾಟೆ ತರಬೇತಿ ನೀಡಿದವರಿಗೆ ಇದುವರೆಗೂ ಗೌರವಧನ ನೀಡಿಲ್ಲ. ಸ್ವಂತ ಖರ್ಚಿನಲ್ಲಿ ಹಾಸ್ಟೆಲ್ಗೆ ತೆರಳಿ ತರಬೇತಿ ನೀಡಿದವರು ಈಗ ಗೌರವಧನ ಪಡೆಯಲು ಹರಸಾಹಸ ಪಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕೂಡಲೇ ಗೌರವಧನ ಪಾವತಿಸುವಂತೆ ಒತ್ತಾಯಿಸಿದರು.