More

    ಮಳೆಯಲ್ಲಿ ಸಿಲುಕಿಕೊಂಡಿದ್ದ ಬೆಕ್ಕಿನ ಮರಿ ರಕ್ಷಿಸಿದ; ನೆಟ್ಟಿಗರ ಮನಗೆದ್ದ

    ಮುಂಬೈ: ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಇದರಿಂದಾಗಿ ರಸ್ತೆಗಳಲ್ಲಿ ಪ್ರವಾಹೋಪಾದಿಯಲ್ಲಿ ನೀರು ಹರಿಯುತ್ತಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅಲ್ಲಿರುವ ಜನರ ಪರಿಸ್ಥಿತಿ ಹೇಳತೀರದಾಗಿದೆ. ಕೋವಿಡ್​-19 ಪಿಡುಗಿನಿಂದಾಗಿ ಮೌನವಾಗಿದ್ದ ನಗರದ ಜನಜೀವನ ಈಗ ಸಂಪೂರ್ಣ ಸ್ತಬ್ಧವಾಗಿದೆ.

    ಇಂಥ ಪರಿಸ್ಥಿತಿಯಲ್ಲಿ ರಸ್ತೆಯಲ್ಲಿ ನಿಂತಿದ್ದ ನೀರಿನಲ್ಲಿ ಸಿಲುಕಿಕೊಂಡು ಪರದಾಡುತ್ತಿದ್ದ ಬೆಕ್ಕಿನಮರಿಯನ್ನು ಬೈಕ್​ ಸವಾರನೊಬ್ಬ ರಕ್ಷಿಸಿ, ತನ್ನೊಂದಿಗೆ ಕರೆದೊಯ್ಯುವ ಮೂಲಕ ಮಾನವೀಯತೆ ಮೆರೆದಿರುವುದು ನೆಟ್ಟಿಗರ ಮೆಚ್ಚುಗೆಗೆ ಕಾರಣವಾಗಿದೆ.

    ಇದನ್ನೂ ಓದಿ: ಸುಶಾಂತ್​ ಹಣ ದುರ್ಬಳಕೆ ಪ್ರಕರಣ; ವಿಚಾರಣೆಗೆ ಹಾಜರಾದ ರಿಯಾ ಚಕ್ರವರ್ತಿಗೆ ಇಡಿ ಡ್ರಿಲ್​!

    ಮುಂಬೈನ ಬಹುತೇಕ ರಸ್ತೆಗಳಂತೆ ವಾಡ್ಲಾ ಪ್ರದೇಶದ ರಸ್ತೆ ಕೂಡ ಜಲಾವೃತಗೊಂಡಿತ್ತು. ಇದರಿಂದಾಗಿ ಅಲ್ಲಿನ ಜನರ ಓಡಾಟಕ್ಕೆ ಭಾರಿ ತೊಂದರೆ ಉಂಟಾಗಿತ್ತು. ಇಂಥದ್ದರಲ್ಲಿ ಮೋರಿಯ ಬಳಿ ಬೆಕ್ಕಿನಮರಿಯೊಂದು ನೀರಿನಲ್ಲಿ ಸಿಲುಕಿಕೊಂಡು ರಕ್ಷಣೆಗಾಗಿ ಮೊರೆ ಇಡುತ್ತಿತ್ತು. ಅದರ ಸ್ಥಿತಿ ಕಂಡು ಆ ಮಾರ್ಗದಲ್ಲಿ ತೆರಳುತ್ತಿದ್ದ ಬೈಕ್​ ಸವಾರನೊಬ್ಬನ ಮನಕರಗಿತು.

    ತಕ್ಷಣವೇ ವಾಹನವನ್ನು ನಡುರಸ್ತೆಯಲ್ಲೇ ನಿಲ್ಲಿಸಿದ ಆತ, ನಿಧಾನವಾಗಿ ಬೆಕ್ಕಿನಮರಿಯ ಬಳಿ ಹೋಗಿ, ಅದನ್ನು ಜೋಪಾನವಾಗಿ ಎತ್ತಿಕೊಂಡು ತನ್ನ ಬೈಕ್​ ಮೇಲೆ ಇರಿಸಿದ. ಬೆಕ್ಕಿನಮರಿಗೆ ಏನು ಮಾಡಬೇಕು ಎಂದು ತಿಳಿಯದೆ, ಬೈಕ್​ನಿಂದ ಎಗರಲು ಮುಂದಾಗುತ್ತಿದ್ದಂತೆ, ಅದನ್ನು ಸಮಾಧಾನ ಮಾಡಿದ ಆ ಬೈಕ್​ ಸವಾರ, ನಿಧಾನವಾಗಿ ಬೈಕ್​ ಹತ್ತಿ, ಬೆಕ್ಕಿನಮರಿಯೊಂದಿಗೆ ತೆರಳಿದ.

    ದಾರಿಹೋಕರೊಬ್ಬರು ಈ ವಿಡಿಯೋವನ್ನು ಚಿತ್ರೀಕರಿಸಿಕೊಂಡು ಖಾಸಗಿ ಸುದ್ದಿಸಂಸ್ಥೆಯ ಟ್ವಿಟ್ಟರ್​ ಖಾತೆಯಲ್ಲಿ ಹರಿಬಿಟ್ಟಿದ್ದಾರೆ. ಇದನ್ನು ವೀಕ್ಷಿಸಿರುವ ಜನರು ಬೈಕ್​ ಸವಾರನ ಕೆಲಸ ಮೆಚ್ಚಿಕೊಂಡು ಅಭಿನಂದಿಸಿದ್ದಾರೆ. ಮಾನವೀಯತೆ ಇನ್ನೂ ಸತ್ತಿಲ್ಲ, ಅದು ಜೀವಂತವಾಗಿದೆ ಎಂದು ಕೆಲವು ಕಮೆಂಟ್​ ಮಾಡಿದ್ದಾರೆ.

    ಆ.10ರಂದು ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts